Advertisement

ಧರ್ಮಕ್ಕಿಂತ ರಾಷ್ಟ್ರ ದೊಡ್ಡದು ಎನ್ನುವ ಭಾವ ಬರಲಿ : ಈಶ್ವರ್ ಖಂಡ್ರೆ

06:06 PM May 28, 2022 | Team Udayavani |

ಭಾಲ್ಕಿ: ಧರ್ಮಕ್ಕಿಂತಲೂ ರಾಷ್ಟ್ರ ದೊಡ್ಡದು ಎನ್ನುವ ಭಾವ ನಮ್ಮಲ್ಲಿರಬೇಕು. ತಮ್ಮ ಸರ್ವಸ್ವವನ್ನೂ ಬದಿಗೊತ್ತಿ ರಾಷ್ಟ್ರಕ್ಕಾಗಿ ಹೋರಾಡಿದ ಮಹನೀಯರಿಗೆ ನಮನ ಸಲ್ಲಿಸುವ ಕಾರ್ಯವಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.

Advertisement

ಪಟ್ಟಣದ ಟೌನ್‍ಹಾಲ್ (ಪುರಭವನ)ದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಷ್ಟ್ರಕ್ಕಾಗಿ ಹೋರಾಟ ಮಾಡಿದವರಿಗೆ ನಮನ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ತಿಳುವಳಿಕೆ ನಮ್ಮ ಯುವಕರಿಗೆ ಕೊಡಬೇಕಾಗಿದೆ. ಸ್ವಾತಂತ್ರ್ಯ ಸಿಕ್ಕ ಮೊದಮೊದಲು ಪ್ರತಿಶತ 10% ಇದ್ದ ಸಾಕ್ಷರತೆ ಈಗ 75% ತರುವಲ್ಲಿ ಅಂದಿನ ಸರ್ಕಾರಗಳ ಕೊಡುಗೆ ಅಪಾರವಾಗಿದೆ. ನೆಹರು ಅವರ ಕಾಲದಲ್ಲಿ ಸ್ಥಾಪಿಸಿದ ಸರ್ಕಾರದ ಸಾರ್ವಜನಿಕ ಉದ್ಯಮಗಳು ಇಂದಿಗೂ ಮಾದರಿಯಾಗಿವೆ ಎಂದರು.

ಈ ರಾಷ್ಟ್ರಕ್ಕೆ ಬಲಾಢ್ಯವಾದ ಶಕ್ತಿ ತುಂಬಿದ್ದು ಅಂದಿನ ಇಂದಿರಾ ಗಾಂಧಿ ಸರ್ಕಾರದ ಆಡಳಿತ. ನಮ್ಮಲ್ಲಿ ರಾಷ್ಟ್ರ ಧರ್ಮ ಮುಖ್ಯವಾಗಿರಬೇಕು. ಜಾತಿ, ಜಾತಿಗಳ ಮಧ್ಯ ತಂದಿಡುವ ಕಾರ್ಯಕ್ಕೆ ತಿಲಾಂಜಲಿ ಹಾಕಬೇಕು. ಸಾಮರಸ್ಯ ಕೆಡಿಸುವ ಕಿಡಿಗೇಡಿಗಳಿಗೆ ಮಟ್ಟ ಹಾಕಬೇಕು. ಸಮಗ್ರತೆಯೇ ನಮ್ಮ ಮೂಲ ಮಂತ್ರವಾಗಬೇಕು ಎಂದರು. ಅಲ್ಲದೇ ವಿವಿಧ ಕಲಾವಿದರ ಮಾಶಾಸನ ಹೆಚ್ಚಿಸುವ ಕಾರ್ಯವಾಗಬೇಕು. ಕಲೆಗೆ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಹೇಳಿದರು.

ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಡಾ| ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿ ಮಾತನಾಡಿ, ಗಡಿಭಾಗದಲ್ಲಿ ಸೈನಿಕರು ಸದೃಢವಾಗಿದ್ದರೆ, ದೇಶದೊಳಗಿರುವ ನಾವೆಲ್ಲರೂ ಸದೃಢವಾಗಿರಲು ಸಾಧ್ಯ. ಧರ್ಮಕ್ಕಿಂತ ರಾಷ್ಟ್ರ ಮೊದಲು ಎನ್ನುವ ಭಾವ ಬರಲಿ ಎಂದು ಹೇಳಿದರು.

Advertisement

ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಹೀರಾ ನಸೀಮಾ ರವರು ಮುಖ್ಯಅಥಿಗಳಾಗಿ ಮಾತನಾಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ| ಕೋಟ್ರೇಶ ಸ್ವಾತಂತ್ರ್ಯಕ್ಕೆ ಕರ್ನಾಟಕದ ಕೊಡುಗೆ ವಿಷಯವಾಗಿ ವಿಶೇಷ ಉಪನ್ಯಾಸ ಮಂಡಿಸಿದರು.

ಇದೇ ವೇಳೆ ಸ್ವಾತಂತ್ರ ಹೋರಾಟದಲ್ಲಿ ಕರ್ನಾಟಕ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು. ಅಲ್ಲದೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ನಿಮಿತ್ಯ ವಿವಿಧ ಶಾಲಾ ಕಾಲೇಜುಗಳಲ್ಲಿ ಆಯೋಜಿಸಿದ್ದಪ್ರಭಂಧ, ಭಾಷಣ, ಚಿತ್ರಕಲೆ, ರಂಗೋಲಿ ಸ್ಪದ್ರ್ಧೇಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಸ್ವಾತಂತ್ರಯೋಧ ರಾಮರಾವ ಕುಲಕರ್ಣಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕಲಾತಂಡದವಿರಗೆ ಪ್ರಶಸ್ತಿ ಪತ್ರನೀಡಲಾಯಿತು. ನಂತರ ವಿವಿಧ ಕಲಾ ತಂಡಗಳಿಂದ ಸಾಂಸ್ಕøತಿ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಕಲಾವಿದ ವಿಯಕುಮಾರ ಸೋನಾರೆ, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಬಸವಕಲ್ಯಾಣಸಹಾಯಕ ಆಯುಕ್ತ ರಮೇಶಕುಮಾರ, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಸಮಾಜ ಕಲ್ಯಾಣಾಧಿಕಾರಿ ಸತೀಷ ಸಂಗಣ್ಣನವರ, ತಹಸೀಲ್ದಾರ ಕೀರ್ತಿ ಚಾಲಕ, ಸೋಮನಾಥಪ್ಪ ಅಸ್ಟೂರೆ, ಬಿಆರ್‍ಪಿ ಬಸವರಾಜ ದಾನಾ, ಹಣಮಂತ ಕಾರಾಮುಂಗೆ, ಸಂತೋಷ ಬಿಜಿಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿ ಮಹೋಹರ ಹೊಳಕರ, ವಿಜಯಕುಮಾರ ರಾಜಭವನ, ಸರ್ಕಾರಿನೌಕರರ ಸಂಘದ ಅಧ್ಯಕ್ಷ ರಾಜೆಪ್ಪ ಪಾಟೀಲ, ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಅಶೋಕ ಕುಂಬಾರ, ಆಶಾ ರಾಠೋಡ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ.ವಾಯ್.ಜಿಡ್ಡೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next