Advertisement

ಪರಿಸರ ಜಾಗೃತಿ ವಾಹನ ಉದ್ಘಾಟನೆ

11:29 AM Nov 22, 2017 | |

ಮಹಾನಗರ: ಸಾರಿಗೆ ಇಲಾಖೆ, ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ನಡೆಸುವ ವಾಯುಮಾಲಿನ್ಯ ನಿಯಂತ್ರಣ ಮಾಸ – 2017ರ ‘ಏಳಿ ಎದ್ದೇಳಿ ಪರಿಸರ ಉಳಿಸೋಣ’ ಎಂಬ ಘೋಷಣೆಯೊಂದಿಗೆ ಮಂಗಳೂರಿನಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಹಿತಿಯನ್ನೊಳಗೊಂಡ ಜಾಗೃತಿ ವಾಹನವನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಉದ್ಘಾಟಿಸಿದರು.

Advertisement

ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀನಿವಾಸ್‌ ನಾಯಕ್‌, ಹಿರಿಯ ಪ್ರಾದೇಶಿಕ ರಸ್ತೆ ಸಾರಿಗೆ ಅಧಿಕಾರಿ ಜಿ.ಎಸ್‌. ಹೆಗಡೆ, ಏರ್‌ ಪೋರ್ಟ್‌ ಡೈರೆಕ್ಟರ್‌ (ನಿವೃತ್ತ) ಎಂ.ಆರ್‌. ವಾಸುದೇವ, ನಿಸರ್ಗ ಪಬ್ಲಿಸಿಟಿಯ ಮಂಜುನಾಥ್‌.ಡಿ. ಮತ್ತು ಪತ್ರಕರ್ತ ಸಂಘದ ಸದಸ್ಯರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next