Advertisement

ಎಂಜಿನಿಯರ್‌ಗಳಿಗೆ ಪ್ರತಿದಿನ ಹೊಸತು ಡಾ|ಶುಭಾಂಗ

10:40 AM Sep 16, 2018 | Team Udayavani |

ಮಂಗಳೂರು: ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಪರಿಶ್ರಮ ಮತ್ತು ಬದ್ಧತೆಯಿಂದ ಕೆಲಸ ಮಾಡಿದರೆ ಗೆಲುವು ಸಾಧ್ಯ. ಪ್ರತಿದಿನ ಹೊಸತನ್ನು ಕಲಿಯುತ್ತಾ ಕಾರ್ಯನಿರ್ವಹಿಸುವುದು ಈ ಕ್ಷೇತ್ರದ ವೈಶಿಷ್ಟé ಎಂದು ಎನ್‌ಐಟಿಕೆ ಸುರತ್ಕಲ್‌ನ ಇ ಆ್ಯಂಡ್‌ ಇ ವಿಭಾಗದ ಪ್ರೊಫೆಸರ್‌ ಡಾ| ಕೆ.ಎಸ್‌. ಶುಭಾಂಗ ಹೇಳಿದರು.

Advertisement

ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಅವರ 158ನೇ ಜನ್ಮದಿನಾಚರಣೆಯ ಅಂಗವಾಗಿ ಶನಿವಾರ ನಡೆದ ಎಂಜಿನಿಯರ್‌ಗಳ ದಿನಾಚರಣೆಯಲ್ಲಿ ಎಂಜಿನಿಯರ್ ಡೇ-2018 ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ದ ಇನ್‌ಸ್ಟಿಟ್ಯೂಶನ್‌ ಆಫ್‌ ಎಂಜಿನಿ ಯರ್ (ಇಂಡಿಯಾ), ಕೊಡಗು, ದ.ಕ. ಮತ್ತು ಉಡುಪಿ ಎಂಜಿನಿಯರ್ ಅಸೋಸಿಯೇಶನ್‌ ಹಾಗೂ ಇನ್‌ಸ್ಟಿಟ್ಯೂಶನ್‌ ಆಫ್‌ ವ್ಯಾಲೂವರ್ ಮಂಗಳೂರು ಘಟಕಗಳ ಆಶ್ರಯದಲ್ಲಿ ಈ ಕಾರ್ಯಕ್ರಮ ನಗರದ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ನಡೆಯಿತು.

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ವೇಗವಾಗಿ ಕ್ಷೇತ್ರ ಪರಿಣತಿ ಸಾಧಿಸಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಾಜೆಕ್ಟೆçಲ್‌ನ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ಕನ್ಸಲ್ಟೆಂಟ್‌ ಅನಿರುದ್ಧ ರಾವ್‌ ಕಟಪಾಡಿ ಅವರಿಗೆ ಡಾ| ಬಿ.ಆರ್‌. ಸಾಮಗ ಯುವ ಸಿವಿಲ್‌ ಎಂಜಿನಿಯರ್‌ ಪ್ರಶಸ್ತಿ, ಡಾ| ವಿದ್ಯಾ ಶೆಟ್ಟಿ ಕೆ. ಅವರಿಗೆ ಮಂಗಳೂರು ಲೋಕಲ್‌ ಸೆಂಟರ್‌ ಯಂಗ್‌ ಎಂಜಿನಿಯರ್‌ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ನಿವೃತ್ತ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಬಿ.ಎಸ್‌. ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದರು. ಐಇಐ, ಎಂಎಲ್‌ಸಿಯ ಅಧ್ಯಕ್ಷ ಡಾ| ಕೆ. ಪಾಂಡುರಂಗ ವಿಠಲ್‌, ಕಾರ್ಯದರ್ಶಿ ಡಾ| ಬಿ.ಎಂ. ಸುನಿಲ್‌, ಇನ್‌ಸ್ಟಿಟ್ಯೂಶನ್‌ ಆಫ್‌ ವ್ಯಾಲೂವರ್ ಮಂಗಳೂರು ಘಟಕದ ಅಧ್ಯಕ್ಷ ಪ್ರೊ| ಜಿ.ಆರ್‌. ರೈ, ಕಾರ್ಯದರ್ಶಿ ಎಸ್‌.ಎನ್‌. ಭಟ್‌, ಕೊಡಗು, ದ.ಕ. ಮತ್ತು ಉಡುಪಿ ಎಂಜಿನಿಯರ್ ಅಸೋಸಿಯೇಶನ್‌ನ ಕಾರ್ಯದರ್ಶಿ ಎಂ. ದಿವಾಕರ್‌ ಶೆಟ್ಟಿ, ಕೆಪಿಟಿ ಪ್ರಾಂಶುಪಾಲ ವಿಜಯ್‌ಕುಮಾರ್‌ ಉಪಸ್ಥಿತರಿದ್ದರು.

ಅಸೋಸಿಯೇಶನ್‌ನ ಕಾರ್ಯಾ ಧ್ಯಕ್ಷ ಸತೀಶ್‌ ರಾವ್‌ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next