Advertisement

ನೀತಿ ಸಂಹಿತೆ ಜಾರಿ: ಮುಖಂಡರ ಫ್ಲೆಕ್ಸ್‌ ತೆರವು

03:28 PM Sep 23, 2019 | Team Udayavani |

ಕೆ.ಆರ್‌.ಪೇಟೆ: ಚುನಾವಣಾ ಆಯೋಗ ಉಪ ಚುನಾವಣೆ ಘೋಷಣೆ ಮಾಡಿರುವು ದರಿಂದ ಪಟ್ಟಣದಲ್ಲಿ ಅಳವಡಿಸಿದ್ದ ರಾಜಕೀಯ ನಾಯಕ ಫ್ಲೆಕ್ಸ್‌, ಶುಭಾಷಯ ನಾಮಫ‌ಲಕ ಮತ್ತಿತರರು ಪ್ರಚಾರದ ವಸ್ತುಗಳನ್ನುಪುರಸಭಾ ಸಿಬ್ಬಂದಿ ತೆರವುಗೊಳಿಸಿದರು.ಕಾಂಗ್ರೆಸ್‌ ಮುಖಂಡ ಹರಳಹಳ್ಳಿ ವಿಶ್ವನಾಥ್‌ ತನ್ನ ಗಾಡ್‌ಫಾದರ್‌ ಡಿ.ಕೆ. ಶಿವಕುಮಾರ್‌ ಅವರ ಫೋಟೋ ಹಾಕಿಗೌರಿ ಗಣೇಶ ಹಬ್ಬದ ಶುಭಾಷಯ ಫ‌ಲಕಗಳನ್ನು ತಾಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ಹಾಕಿಸಿದ್ದರು.

Advertisement

ಅದರಂತೆ ಪಟ್ಟಣ ದಲ್ಲಿಯೂ 300 ಕ್ಕೂ ಹೆಚ್ಚು ಬೋರ್ಡ್‌ ಗಳನ್ನು ರಸ್ತೆಯ ವಿದ್ಯುತ್‌ ಕಂಬ, ಕಟ್ಟಡ, ಮರ ಸೇರಿ ದಂತೆ ಖಾಲಿ ಸ್ಥಳಗಳಲ್ಲಿ ಶುಭಾಷಯ ಫ್ಲೆಕ್ಸ್‌ ಅಳವಡಿಸಿದ್ದರು. ಪುರಸಭೆ ನಾಲ್ಕು ಸಿಬ್ಬಂದಿ 2 ವಾಹನಗಳಲ್ಲಿ ವಿಶ್ವನಾಥ್‌ಅಳವಡಿಸಿದ್ದ ಶುಭಾಷಯ ಫ‌ಲಕ ತೆರವುಗೊಳಿಸಲು ಒಂದುದಿನ ಪೂರ್ತಿ ಶ್ರಮಿಸಿದ್ದಾರೆ. ಇದರ ಜೊತೆಗೆ ಇತರೆ ರಾಜಕೀಯ ನಾಯಕರ ಫೋಟೊ, ಎಪಿಎಂಸಿ, ಅಧ್ಯಕ್ಷರು, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷರಿಗೆ ಅವರ ಅಭಿಮಾನಿಗಳು ಶುಭಕೋರಿದ್ದ ನಾಮಫ‌ಲಕ ತೆರವುಮಾಡಲಾಯಿತು.

ಔಷಧಾಲಯಕ್ಕೆ, ಜೋತಿಷ್ಯ ನೀತಿ ಸಂಹಿತೆ: ಪಟ್ಟಣದ ಮುಖ್ಯ ರಸ್ತೆಯ ಪ್ರಧಾನ್‌ಮಂತ್ರಿ ಜನೌಷಧ ಕೇಂದ್ರದಲ್ಲಿ ಅಳವಡಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೋಟೋವನ್ನು ತೆರವುಗೊಳಿಸಲಾಯಿತು. ಜೊತೆಗೆ ಪಟ್ಟಣದಲ್ಲಿ ಜೋತಿಷ್ಯ ಹೇಳಿ

ಜೀವನ ನಡೆಸುತ್ತಿರುವವರು ಅವರ ಅಂಗಡಿಗಳ ಮುಂದಿನ ರಸ್ತೆಯಲ್ಲಿ ಅಳವಡಿಸಿದ್ದ ಅಂಗೈ ಹಸ್ತದ ಚಿತ್ರ ಇರುವ ಬೋರ್ಡ್‌ ತೆರವು ಗೊಳಿಸಲಾಯಿತು. ಪ್ರವಾಸಿ ಮಂದಿರ ವೃತ್ತದ ಅಪ್ಪಾಜಿ ಕ್ಯಾಂಟೀನ್‌ ಮುಂಭಾಗ ಅಳವಡಿಸಿದ್ದ ಎಚ್‌.ಡಿ.  ಕುಮಾರಸ್ವಾಮಿ ಫೋಟೋ, ಇಂದಿರಾ ಕ್ಯಾಂಟೀನ್‌ನ ಇಂದಿರಾ ಗಾಂಧಿ ಫೋಟೋವನ್ನು ಪೇಪರ್‌ನಿಂದ ಮುಚ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next