Advertisement

Bengaluru: ಮಲಗುವ ಜಾಗದ ವಿಚಾರಕ್ಕೆ ಸ್ನೇಹಿತನ ಹತ್ಯೆ; ಆರೋಪಿ ಸೆರೆ

11:53 AM Aug 29, 2024 | Team Udayavani |

ಬೆಂಗಳೂರು: ಮಲಗುವ ಜಾಗದ ವಿಚಾರಕ್ಕೆ ಕೂಲಿ ಕಾರ್ಮಿಕನ ಕೊಲೆಗೈದಿದ್ದ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಗಡೆ ನಗರ ನಿವಾಸಿ ಸಾದಿಕ್‌(30) ಬಂಧಿತ.

Advertisement

ಆರೋಪಿ ಆ.23ರಂದು ಪುಷ್ಪ ರಾಜ್‌ (27) ಎಂಬಾತನನ್ನು ಕೊಲೆಗೈದಿದ್ದ ಎಂದು ಪೊಲೀಸರು ಹೇಳಿದರು.

ಸಾದಿಕ್‌ ಮತ್ತು ಪುಷ್ಪರಾಜ್‌ ಕೂಲಿ ಕೆಲಸ ಮಾಡಿಕೊಂಡಿದ್ದು, ಸಂಪಿಗೆಹಳ್ಳಿಯ 80 ಅಡಿ ರಸ್ತೆಯಲ್ಲಿ ಖಾಲಿ ಜಾಗದ ಶೆಡ್‌ನ‌ಲ್ಲಿ ಮದ್ಯದ ಅಮಲಿನಲ್ಲಿ ಮಲಗುತ್ತಿದ್ದರು. ಆ.23ರಂದು ಸಾದಿಕ್‌ ಮಲಗುವ ಜಾಗದಲ್ಲಿ ಪುಷ್ಪರಾಜ್‌ ಮಲಗಿದ್ದ. ಕೆಲ ಹೊತ್ತಿನ ಬಳಿಕ ಸ್ಥಳಕ್ಕೆ ಬಂದ ಸಾದಿಕ್‌, ಜಾಗ ಬಿಡುವಂತೆ ಕೇಳಿದ್ದಾನೆ. ಅದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಯಾಗಿದ್ದು, ಅದು ವಿಕೋಪಕ್ಕೆ ಹೋದಾಗ ಕಲ್ಲು ಎತ್ತಿ ಹಾಕಿ ಹತ್ಯೆಗೈದು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಂಪಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next