Advertisement

Bengaluru: ವ್ಯಕ್ತಿ ಕೊಲೆಗೆ ಯತ್ನ; 6 ಮಂದಿ ಆರೋಪಿಗಳ ಸೆರೆ

10:57 AM Aug 27, 2024 | Team Udayavani |

ಬೆಂಗಳೂರು: ಹಣಕಾಸು ವಿಚಾರಕ್ಕೆ ಶೋಹಿಬ್‌ ಎಂಬಾತನ ಹತ್ಯೆಗೆ ಯತ್ನಿಸಿದ ಪ್ರಕರಣ ಸಂಬಂಧ 6 ಮಂದಿ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಲಿಂಗರಾಜಪುರ ನಿವಾಸಿಗಳಾದ ಮೆಹಬೂಬ್‌ ಪಾಷಾ (48), ಫೈರೋಜ್‌ ಪಾಷಾ (48), ನಿಜಾರ್‌ ಪಾಷಾ (48), ರಜಾಕ್‌ ಪಾಷಾ (40), ನಫೀಜ್‌ (38),  ಮನ್ಸೂರ್‌ (34) ಬಂಧಿತರು. ಆರೋಪಿಗಳು ಆ.24ರಂದು ರಾತ್ರಿ ಸುಮಾರು 8.30ಕ್ಕೆ ಲಿಂಗರಾಜಪುರದ ಆಯಿಲ್‌ ಮಿಲ್‌ ರಸ್ತೆಯಲ್ಲಿ ಶೋಹಿಬ್‌ (30) ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹÇÉೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಳಾದ ದಾವೂದ್‌ ಮತ್ತು ಜಿಶಾನ್‌ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಏನಿದು ಪ್ರಕರಣ?: ಕಮ್ಮನಹಳ್ಳಿ ನಿವಾಸಿಯಾದ ಶೋಹಿಬ್‌ ಮತ್ತು ದಾವೂದ್‌ ಸ್ನೇಹಿತರು. ಶೋಹಿಬ್‌ಗ ದಾವೂದ್‌ ಸಹೋದರ ಜಿಶಾನ್‌ 1.70 ಲಕ್ಷ ರೂ. ನೀಡಬೇಕಿತ್ತು. ಈ ಹಣ ವಾಪಸ್‌ ನೀಡುವಂತೆ ಶೋಹಿಬ್‌, ಜಿಶಾನ್‌ನನ್ನು ಹಲವು ಬಾರಿ ಕೇಳಿದರೂ ಕೊಟ್ಟಿರಲಿಲ್ಲ. ಶೋಹಿಬ್‌ ಹಣ ವಾಪಾಸ್‌ ಕೇಳಿದ್ದಕ್ಕೆ ದಾವೂದ್‌ ಹಾಗೂ ಜಿಶಾನ್‌ ಕೋಪಗೊಂಡಿದ್ದರು.

ಶೋಹಿಬ್‌ ಆ.24ರಂದು ರಾತ್ರಿ ಲಿಂಗರಾಜಪುರದ ಆಯಿಲ್‌ ಮಿಲ್‌ ರಸ್ತೆಯಲ್ಲಿ  ಹೋಗುತ್ತಿದ್ದ. ಈ ವೇಳೆ ಆರೋಪಿಗಳು ಶೋಹಿಬ್‌ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದರು. ಬಳಿಕ ಕಾರಿನಲ್ಲಿ ಕೂರಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಾರ್ಕೆಟ್‌ ಬಳಿ  ಎಸೆದು ಹೋಗಿದ್ದರು. ಬಳಿಕ ಸ್ಥಳೀಯರು ಶೋಹಿಬ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next