Advertisement

ಬಹಿರಂಗ ಪ್ರಚಾರ ಅಂತ್ಯ

12:00 PM Jun 10, 2018 | Team Udayavani |

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ಶನಿವಾರ ಸಂಜೆ ತೆರೆಬಿದ್ದಿದ್ದು, ಅಭ್ಯರ್ಥಿಗಳು ರೋಡ್‌ ಶೋ, ಬೈಕ್‌ ರ್ಯಾಲಿ ನಡೆಸಿದರು. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್‌ ಬಾಬು ಪರವಾಗಿ ಕೇಂದ್ರ ಸಚಿವ ಅನಂತಕುಮಾರ್‌ ನೇತೃತ್ವದಲ್ಲಿ ಬೃಹತ್‌ ಬೈಕ್‌ ರ್ಯಾಲಿ ನಡೆಯಿತು.

Advertisement

ಜೆ.ಪಿ.ನಗರ ಒಂದನೇ ಹಂತದಿಂದ ರಾಗಿಗುಡ್ಡ, ಜೆ.ಪಿ.ನಗರ ಮೂರನೇ ಹಂತ, ಸಾರಕ್ಕಿ, ಶಾಕಾಂಬರಿ ನಗರ, ಜಯನಗರ 5 ಮತ್ತು 7ನೇ ಬ್ಲಾಕ್‌ನಲ್ಲಿ ಬೈಕ್‌ ರ್ಯಾಲಿ ನಡೆಯಿತು. ಪಟ್ಟಾಭಿನಗರದಲ್ಲೂ ಬೈಕ್‌ ರ್ಯಾಲಿ, ಪಾದಯಾತ್ರೆ ಮೂಲಕ ಪ್ರಹ್ಲಾದ್‌ಬಾಬು ಮತ ಯಾಚಿಸಿದರು.

ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಅವರು ಗುರಪ್ಪನಪಾಳ್ಯ, ಬಿಸ್ಮಿಲ್ಲಾನಗರ, ಜಯನಗರ 4ನೇ ಬ್ಲಾಕ್‌, ನಕಲ್‌ಬಂಡೆ, ಅರಸು ಕಾಲೋನಿ, ಕಾರ್ಪೋರೇಷನ್‌ ಕಾಲೋನಿ, ರಾಗಿಗುಡ್ಡ, ತಾಯಪ್ಪನಹಳ್ಳಿ, ಪಟ್ಟಾಭಿರಾಮನಗರದಲ್ಲಿ ರೋಡ್‌ ಶೋ, ಪಾದಯಾತ್ರೆ ಮೂಲಕ ಪ್ರಚಾರ ನಡೆಸಿದರು.

ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಅವರು ಕಾರ್ಯಕರ್ತರು, ಬೆಂಬಲಿಗರೊಂದಿಗೆ ಜಯನಗರ 4ನೇ ಬ್ಲಾಕ್‌, ಬೈರಸಂದ್ರ, ಜಯನಗರ ಪೂರ್ವ, ಮಾರೇನಹಳ್ಳಿ, ಶಾಕಾಂಬರಿನಗರ, ಸಾರಕ್ಕಿ, ಜೆ.ಪಿ.ನಗರ, ಪಟ್ಟಾಭಿರಾಮನಗರ, ತಿಲಕ್‌ನಗರದಲ್ಲಿ ರೋಡ್‌ ಶೋ ಮಾಡಿ ಮೈಯ್ನಾಸ್‌ ಹೋಟೆಲ್‌ ಜಂಕ್ಷನ್‌ನಲ್ಲಿ ಸಂಜೆ 5.55ರ ಹೊತ್ತಿಗೆ ಮುಕ್ತಾಯಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next