Advertisement

BSY ಜತೆಗಿನ ವೈಮನಸ್ಸು ಸಮಾಪ್ತಿ: ಯತ್ನಾಳ

09:04 PM Apr 27, 2023 | Team Udayavani |

ಬೆಳಗಾವಿ: ನನ್ನ ಮತ್ತು ಬಿ.ಎಸ್‌.ಯಡಿಯೂರಪ್ಪ ನಡುವೆ ಯಾವ ವೈಮಸ್ಸು ಇಲ್ಲ. ನಮ್ಮಿಬ್ಬರ ನಡುವಿನ ಭಿನ್ನಮತ ಶಾಶ್ವತವಾಗಿ ಸಮಾಪ್ತಿಯಾಗಿದೆ ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮಿಬ್ಬರ ಮಧ್ಯೆ ಯಾವುದೇ ವೈಯಕ್ತಿಕ ಜಗಳ ಇಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಯಾವುದೇ ವೈಯಕ್ತಿಕ ಕೆಲಸ ತೆಗೆದುಕೊಂಡು ಹೋಗಿಲ್ಲ. ಈಗ ಭಿನ್ನಮತ ಶಾಶ್ವತವಾಗಿ ಶಮನವಾಗಿದೆ. ಇದಕ್ಕೆ ಯಾವ ರೀತಿಯ ಒಪ್ಪಂದವೂ ಆಗಿಲ್ಲ. ಪಕ್ಷದ ನಿರ್ದೇಶನದಂತೆ ನಾನು ಮತ್ತು ಯಡಿಯೂರಪ್ಪ ಅಥಣಿಯಲ್ಲಿ ಪ್ರಚಾರ ಮಾಡಿದ್ದೇವೆ. ಪಕ್ಷದ ವರಿಷ್ಠರು ಜವಾಬ್ದಾರಿ ವಹಿಸುವ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತೇವೆ ಎಂದರು.

Advertisement

ಕಾಂಗ್ರೆಸ್‌ ಅಧ್ಯಕ್ಷರೇ ಗೂಂಡಾ ಇದ್ದಾರೆ. ಅಂಥವರು ಕೇಂದ್ರ ಗೃಹ ಸಚಿವರ ವಿರುದ್ಧ ದೂರು ನೀಡಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರಿಗೆ ದೂರು ಕೊಡುವ ನೈತಿಕತೆಯೂ ಇಲ್ಲ. ಡಿಕೆಶಿ ಜೈಲಿಗೆ ಹೋಗಿ ಬಂದಿದ್ದು ಸ್ವಾತಂತ್ರÂ ಹೋರಾಟ ಮಾಡಿ ಅಲ್ಲ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಅಂಥವರು ಮುಖ್ಯಮಂತ್ರಿಯಾದರೆ ರಾಜ್ಯದ ಗತಿ ಏನು. ಬಿಜೆಪಿಯಿಂದ ಲಿಂಗಾಯತ ಸಮುದಾಯದ ಕಡೆಗಣನೆ ಆಗಿಲ್ಲ. ಸಾಕಷ್ಟು ಜನರಿಗೆ ಟಿಕೆಟ್‌ ನೀಡಲಾಗಿದೆ. ಶೆಟ್ಟರ್‌, ಸವದಿಗೆ ಬಿಜೆಪಿಯಿಂದ ಯಾವುದೇ ರೀತಿಯ ಅನ್ಯಾಯವಾಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next