Advertisement

BJP-JDS ಕಥೆ ಮುಕ್ತಾಯ ಗ್ಯಾರಂಟಿ: ರಣದೀಪ್‌ ಸಿಂಗ್‌ ಸುರ್ಜೇವಾಲಾ

12:00 AM Aug 10, 2024 | Team Udayavani |

ಮೈಸೂರು: ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಪಾದಯಾತ್ರೆ ಮೂಲಕ ಕಾಂಗ್ರೆಸ್‌ ನೇತೃತ್ವದ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿ ಗ್ಯಾರಂಟಿ ಯೋಜನೆಗಳನ್ನು ನಾಶಗೊಳಿಸಲು ಹೊರಟಿವೆ. ಆದರೆ ಈ ಜನಾಂದೋಲನ ಸಮಾವೇಶದ ಮೂಲಕ ಅವರ ಕತೆ ಮುಗಿಯುವುದು ಗ್ಯಾರಂಟಿ ಎಂಬು ದ ನ್ನು ಜನರು ತೋರಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದರು.

Advertisement

ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು ಕರ್ನಾಟಕವನ್ನು ಸ್ವತ್ಛಗೊಳಿಸಲು ದೊಡ್ಡ ಮಟ್ಟದ ಜನಾಂದೋಲನ ರೂಪಿಸಲಾಗಿದೆ ಎಂದರು.

ಡಿಕೆಶಿ ಕಹಳೆಗೆ ಭೇಷ್‌ ಎಂದ  ಸುರ್ಜೇವಾಲಾ
ಮೈಸೂರು: ಜನಾಂದೋಲನ ಸಮಾವೇಶದ ಉದ್ಘಾಟನೆ ಸಂದರ್ಭ ಕಾಂಗ್ರೆಸ್‌ ನಾಯಕರು ಕಹಳೆ ವಾದ್ಯ ಊದಿದರು.

ಡಿ.ಕೆ. ಶಿವಕುಮಾರ್‌ ಎಲ್ಲರಿಗಿಂತ ಜೋರಾಗಿ ಊದಿದ್ದು, ಜತೆಗಿದ್ದವರಿಗೆ ಅವರನ್ನು ಸರಿಗಟ್ಟಲು ಆಗಲಿಲ್ಲ. ಇದ ನ್ನು ಸೂಕ್ಷ್ಮವಾಗಿ ಗಮನಿಸು ತ್ತಿದ್ದ ಸುರ್ಜೇವಾಲಾ ಡಿಕೆಶಿ ಬಳಿ ತೆರಳಿ ಕೈಕುಲುಕಿ ಭೇಷ್‌ ಎಂದರು.

ಇತ್ತ ಪಶು ಸಂಗೋಪನೆ ಸಚಿವ, ಎಚ್‌.ಕೆ. ಪಾಟೀಲ್‌, ಮಹಮ್ಮದ್‌ ಹ್ಯಾರಿಸ್‌, ಜಮೀರ್‌ ಅಹಮ್ಮದ್‌ ಖಾನ್‌ ಕಹಳೆ ಊದಲು ತಿಣುಕಾ ಡಿದ್ದು ಕಂಡು ಬಂದಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next