Advertisement

ಮಕ್ಕಳನ್ನು ಪ್ರೋತ್ಸಾಹಿಸಿ ಉತ್ತಮ ಪಾಲಕರಾಗಿ: ಬದಾಮಿ

05:57 PM Feb 28, 2022 | Team Udayavani |

ರಬಕವಿ-ಬನಹಟ್ಟಿ (ದು.ನಿಂ ಬೆಳಗಲಿ ಸಭಾ ಮಂಟಪ): ಮನೆಯಲ್ಲಿ ಪಾಲಕರು ಮಕ್ಕಳಿಗೆ ಮೌಲ್ಯಯುತ ಮಾತುಗಳನ್ನು ಹೇಳಿ ಸುಸಂಸ್ಕೃತರನ್ನಾಗಿ ಬೆಳೆಸಬೇಕು. ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಉತ್ತಮ ಪಾಲಕರಾಗಿ. ಮಕ್ಕಳ ಮೇಲೆ ಒತ್ತಡ ಹೇರಿ ಮಕ್ಕಳ ಕಣ್ಣಿಗೆ ಪೊಲೀಸರಾಗಿ ಕಾಣಬೇಡಿ ಎಂದು ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ಎಂ.ಎಸ್‌.ಬದಾಮಿ ಹೇಳಿದರು.

Advertisement

ಹೊಸೂರ ರಬಕವಿಯ ಪದ್ಮಾವತಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ರಬಕವಿ-ಬನಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಮಾತನಾಡಿ, ಮಕ್ಕಳಲ್ಲೂ ಸೂಪ್ತ ಪ್ರತಿಭೆ ಇದೆ. ಮಕ್ಕಳು ಹಾಡುತ್ತಾರೆ, ಚಿತ್ರ ಬರೆಯುತ್ತಾರೆ, ಕವನ ಬರೆಯುತ್ತಾರೆ. ಭಾಷಣ ಮಾಡುವ ಕೌಶಲ್ಯವನ್ನೂ ಹೊಂದಿರುತ್ತಾರೆ. ಮನೆಗಳಲ್ಲಿ, ಶಾಲೆಗಳಲ್ಲಿ ಪ್ರೋತ್ಸಾಹಿಸುವ ಮೂಲಕ ಆ ಪ್ರತಿಭೆ ಹೊರಬರುವಂತೆ ಮಾಡುವುದು ಅವಶ್ಯವಾಗಿದೆ. ಮಕ್ಕಳ ಸಾಹಿತ್ಯ ಸಮ್ಮೇಳನ, ವಿವಿಧ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಿಗೆ ಸೂಕ್ತ ವೇದಿಕೆಯಾಗುತ್ತವೆ ಎಂದರು.

ಡಾ| ಎ.ಎ. ಯಂಡೋಳಿಯವರು ಆರೋಗ್ಯ ಮತ್ತು ಶುಚಿತ್ವ ಕುರಿತು ಮಾತನಾಡಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಹನಗಂಡಿ, ಬನಹಟ್ಟಿ ಟೀಚರ್ ಸೊಸೈಟಿ ಅಧ್ಯಕ್ಷ ಅನಿಲ ಕಡ್ಲಿ, ಪತ್ರಕರ್ತ ಕಿರಣ ಆಳಗಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಈರಣ್ಣ ಲಟ್ಟಿ, ಶ್ರೀಶೈಲ ಕುಂಬಾರ, ನಚಿಕೇತ ಉಮದಿ ವೇದಿಕೆಯಲ್ಲಿದ್ದರು.

ಸಮ್ಮೇಳನಾಧ್ಯಕ್ಷೆ ಭಾಗ್ಯಶ್ರೀ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿಜಯಲಕ್ಷ್ಮೀ ಶೀಲವಂತ ಸಹಅಧ್ಯಕ್ಷತೆ ವಹಿಸಿದ್ದರು. ಮಕ್ಕಳು ಕಿರು ನಾಟಕ, ಸಾಮೂಹಿಕ ನೃತ್ಯ ಪ್ರಸ್ತುತಪಡಿಸಿದರು. ಪರಿಷತ್‌ ತಾಲೂಕು ಉಪಾಧ್ಯಕ್ಷೆ ಶೈಲಾ ಬುರ್ಲಿ, ಮಲ್ಲಿಕಾರ್ಜುನ ಮನಿ¾, ಕಾರ್ಯದರ್ಶಿ ಕಿರಣ ಕರಲಟ್ಟಿ ಇನ್ನಿತರರು ಉಪಸ್ತಿತರಿದ್ದರು. ಶ್ರೀಶೈಲ ಕುಂಬಾರ ಸ್ವಾಗತಿಸಿದರು. ಶ್ರೇಯಾಂಕ ಜೀರಗಾಳ, ಸಂಗಮೇಶ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಂಯೋಜಕ ಶ್ರೀಶೈಲ ಬುರ್ಲಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next