Advertisement

ಪಕ್ಷ ಸಂಘಟನೆಗೆ ಒತ್ತು

10:51 PM Aug 24, 2019 | Lakshmi GovindaRaj |

ಹೊಳೆನರಸೀಪುರ: “ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ನಾನು ಮಾನಸಿಕವಾಗಿ ಕುಗ್ಗಿಲ್ಲ. ಬದಲಾಗಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುತ್ತಿ ದ್ದೇನೆ’ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ. ಶ್ರಾವಣ ಮಾಸದ ಕೊನೆಯ ಶನಿವಾರ ನಿಮಿತ್ತ ಹೊಳೆನರಸೀ ಪುರದ ಹಳೇಕೋಟೆ ಬೆಟ್ಟದ ರಂಗನಾಥನ ದರ್ಶನ ಪಡೆದ ಬಳಿಕ, ಎಚ್‌.ಡಿ.ರೇವಣ್ಣ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

“ನಾನು ಕಳೆದ ಮೂರು ವರ್ಷಗಳ ಹಿಂದೆಯೇ ಲೋಕಸಭೆಗೆ ಸ್ಪರ್ಧಿಸುವು ದಿಲ್ಲ ಎಂದು ಹೇಳಿದ್ದೆ. ಆದರೆ, 2019ರ ಲೋಕಸಭಾ ಚುನಾ ವಣೆಯಲ್ಲಿ ಪರಿಸ್ಥಿತಿಯ ಒತ್ತಡದಿಂದಾಗಿ ತುಮಕೂರು ಕ್ಷೇತ್ರ ದಲ್ಲಿ ಸ್ಪರ್ಧಿಸಬೇಕಾಗಿ ಬಂತು. ಚುನಾವಣೆ ನನಗೆ ಅಪಾರ ಅನುಭವ ತಂದುಕೊಟ್ಟಿತು’ ಎಂದರು.

“ನನ್ನನ್ನು, ನನ್ನ ಕುಟುಂ ಬವನ್ನು ರಾಜಕೀಯವಾಗಿ ಮುಗಿಸುವುದಾಗಿ ಹೇಳಿದ ಬಹ ಳಷ್ಟು ಮಂದಿ ಬಂದು ಹೋಗಿದ್ದಾರೆ. ಅದಕ್ಕೆ ಹೆದರಲ್ಲ. ಕಳೆದ 15 ದಿನಗಳಿಂದ ನಾನು ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುತ್ತಿದ್ದು, ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಕೆಲಸ ಆರಂಭಿಸಿದ್ದೇನೆ. ಪಕ್ಷವನ್ನು ಸದೃಢವಾಗಿ ಕಟ್ಟುವುದು ನನ್ನ ಉದ್ದೇಶ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next