Advertisement

ಪಶುಸಂಪತ್ತಿನ ಆರೋಗ್ಯಕ್ಕೆ ಒತ್ತು

02:23 PM Jun 04, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸಂಕಷ್ಟದನಡುವೆಯು ಜಾನುವಾರುಗಳಿಗೆ ನೀಡಲಾಗುವಎಲ್ಲ ಪ್ರಮುಖ ಲಸಿಕಾ ಕಾರ್ಯಕ್ರಮಗಳುಪ್ರಗತಿಯಲ್ಲಿದ್ದು ಜಾನುವಾರುಗಳ ಆರೋಗ್ಯಕ್ಕೆಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮುಂದಿನ ಆರುತಿಂಗಳ ಲಸಿಕಾ ಅಭಿಯಾನಜಾರಿಯಲ್ಲಿರುತ್ತದೆ ಎಂದುಪಶುಸಂಗೋಪನೆ ಸಚಿವಪ್ರಭು ಚವ್ಹಾಣ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಮೇ ಅಂತ್ಯದ ವರೆಗೆನೆರಡಿ ರೋಗಕ್ಕೆ 43512ಜಾನುವಾರುಗಳಿಗೆ ಲಸಿಕೆನೀಡಲಾಗಿದೆ. ಚಪ್ಪೆ ರೋಗಕ್ಕೆ 198545ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ನೀಲಿನಾಲಿಗೆ ರೋಗ 7308 ಜಾನುವಾರುಗಳಿಗೆನೀಡಲಾಗಿದೆ. ಕರಳು ಬೇನೆ ಲಸಿಕೆಯನ್ನುಎರಡು ಸುತ್ತಿನಲ್ಲಿ 945259 ಜಾನುವಾರುಗಳಿಗೆನೀಡಲಾಗಿದೆ.

ಗಳಲೆ ರೋಗ ಎರಡು ಸುತ್ತಿನಲ್ಲಿ745232 ಜಾನುವಾರುಗಳಿಗೆ ನೀಡಲಾಗಿದೆ.ಪಿ.ಪಿ.ಆರ್‌ ಲಸಿಕೆಯನ್ನು ಎರಡು ಸುತ್ತಿನಲ್ಲಿ41871 ಜಾನುವಾರುಗಳಿಗೆ ನೀಡಲಾಗಿದೆ.ಹುಚ್ಚು ನಾಯಿ ರೋಗಕ್ಕೆ ರಾಜ್ಯದಲ್ಲಿ ಈವರೆಗೆ5575 ನಾಯಿಗಳಿಗೆ ಲಸಿಕೆ ನೀಡಲಾಗಿದೆ.ಕೊಕ್ಕರೆ ರೋಗಕ್ಕೆ ಎರಡು ಸುತ್ತಿನಲ್ಲಿ 777953ಪಕ್ಷಿ/ಕೋಳಿಗಳಿಗೆ ನೀಡಲಾಗಿದೆ. ಕುರಿ ಸಿಡುಬು(ರೋಗೋದ್ರೇಕ ಕಂಡುಬಂದಾಗ ನೀಡಲಾಗುವ ಲಸಿಕೆ) 212569 ಜಾನುವಾರುಗಳಿಗೆನೀಡಲಾಗಿದೆ. ಲಂಪಿಸ್ಕಿನ್‌ ರೋಗಕ್ಕೆ 2150ಜುವಾರುಗಳಿಗೆ ಲಸಿಕೆ ನೀಡಲಾಗಿದೆ ಎಂದುತಿಳಿಸಿದ್ದಾರೆ.

ಮುಂದಿನ 6 ತಿಂಗಳಲ್ಲಿ ರಾಜ್ಯಾದ್ಯಂತ ಲಸಿಕಾ ಕಾರ್ಯಕ್ರಮ ಮುಂದುವರೆ ಯಲಿದ್ದು, ಜೂನ್‌ ತಿಂಗಳಿನಲ್ಲಿ ಗಳಲೆ ರೋಗಹಾಗೂಕರಳು ಬೇನೆ ರೋಗಕ್ಕೆ ಲಸಿಕೆ ನೀಡಲಾಗುತ್ತದೆ.ಜುಲೈನಲ್ಲಿ ಪಿ.ಪಿ.ಆರ್‌ ರೋಗಕ್ಕೆ ಲಸಿಕೆ ನೀಡಲಾಗುತ್ತದೆ.ಆಗÓr…- ತಿಂಗಳಿನಲ್ಲಿಕಾಲುಬಾಯಿಜ್ವರ ಹಾಗೂ ಪಿ.ಪಿ. ಆರ್‌ ರೋಗಕ್ಕೆ ಲಸಿಕೆನೀಡಲಾಗುತ್ತದೆ. ಸೆಪ್ಟೆಂಬರ್‌ನಲ್ಲಿಕಾಲುಬಾಯಿಜ್ವರ ರೋಗಕ್ಕೆ ಲಸಿಕೆ ನೀಡಲಾಗುತ್ತದೆ.ಅಕ್ಟೋಬರ್‌ ಯಾವುದೇ ಲಸಿಕಾ ಅಭಿಯಾನಗಳಿರುವುದಿಲ್ಲ. ನವೆಂಬರ್‌ನಲ್ಲಿ ಗಳಲೆ ರೋಗಕ್ಕೆಲಸಿಕೆ ನೀಡಲಾ ಗುತ್ತದೆ. ಡಿಸೆಂಬರ್‌ ತಿಂಗಳಿನಲ್ಲಿಕರಳು ಬೇನೆ ಹಾಗೂ ಗಳಲೇ ಬೆನೆಗೆ ಲಸಿಕೆನೀಡಲಾಗುತ್ತದೆ ಎಂದು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next