Advertisement

ತುರ್ತು ಸೇವೆ: ನೌಕರರಿಗೆ ವಿಶೇಷ ಬಸ್‌

07:11 AM Apr 25, 2020 | mahesh |

ಮಂಗಳೂರು: ಸರಕಾರಿ ನೌಕರರು ಮತ್ತು ಆರೋಗ್ಯ ಇಲಾಖೆ ಸಿಬಂದಿಗೆ ತುರ್ತು ಸೇವೆ ನೆಲೆಯಲ್ಲಿ ಕಚೇರಿಗೆ ಹಾಜರಾಗಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಿದೆ.

Advertisement

ಕೆಲವು ದಿನಗಳ ಹಿಂದೆ ಜಿಲ್ಲಾಡಳಿತದ ಕೋರಿಕೆ ಮೇರೆಗೆ ಈ ವಿಶೇಷ ಬಸ್‌ ಸಂಚಾರ ಆರಂಭಿಸಿದ್ದು, ಮಂಗಳೂರು ಮತ್ತು ಪುತ್ತೂರು ವಿಭಾಗಗಳಿಂದ ಒಟ್ಟು 7 ಬಸ್‌ಗಳು ಕಾರ್ಯಾಚರಿಸುತ್ತಿವೆ. ಪ್ರತಿ ಬಸ್‌ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೇವಲ 30 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಸರಕಾರಿ ನೌಕರರು ಗುರುತಿನ ಚೀಟಿ ತೋರಿಸಿ ನಿಗದಿತ ಟಿಕೆಟ್‌ ದರ ಪಾವತಿಸಿ ಪ್ರಯಾಣಿಸಲು ಅವಕಾಶ ಇದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ವಿಭಾಗದಿಂದ ವೆನ್ಲಾಕ್‌ ಹಾಗೂ ಲೇಡಿಗೋಷನ್‌ ಆಸ್ಪತ್ರೆಗೆ ಆಗಮಿಸುವ ಆರೋಗ್ಯ ಸಿಬಂದಿಗೆ 3 ಬಸ್‌, ಜಿಲ್ಲಾಧಿಕಾರಿ ಕಚೇರಿ ನೌಕರರಿಗೆ 2 ಬಸ್‌ ಹಾಗೂ ಬಂಟ್ವಾಳಕ್ಕೆ ತೆರಳುವವರಿಗೆ ಒಂದು ಬಸ್‌ನ್ನು ಬೆಳಗ್ಗೆ ಮತ್ತು ಸಂಜೆ ಪುತ್ತೂರು ವರೆಗೆ ಓಡಿಸಲಾಗುತ್ತಿದೆ. ಅದೇ ರೀತಿ ಪುತ್ತೂರಿನಿಂದಲೂ ಮಂಗಳೂರಿಗೆ ಬೆಳಗ್ಗೆ ಮತ್ತು ಸಂಜೆ ತುರ್ತು ಸಿಬಂದಿ ಸಂಚಾರಕ್ಕೆ ಬಸ್‌ ಸಂಚಾರ ವ್ಯವಸ್ಥೆ ಇದೆ.
ಆರೋಗ್ಯ ಇಲಾಖೆ ಮತ್ತು ಡಿಸಿ ಕಚೇರಿ ಸಿಬಂದಿಗೆ ಮಾತ್ರ ಒದಗಿಸಿರುವ ಈ ಬಸ್‌ ಸೌಲಭ್ಯವನ್ನು ಇತರ ಕಚೇರಿಗಳ ಅಧಿಕಾರಿ ಮತ್ತು ಸಿಬಂದಿಗೂ ವಿಸ್ತರಿಸ ಬೇಕೆಂಬ ಬೇಡಿಕೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next