Advertisement

ಸ್ವಾತಂತ್ರ್ಯ ಹೋರಾಟಗಾರರ ಕನಸು ಸಾಕಾರಗೊಳಿಸಿ: ಹಿರೇಮಠ

12:57 PM Aug 16, 2017 | Team Udayavani |

ಹುಬ್ಬಳ್ಳಿ: ಜಗತ್ತಿನ ಭೂಪಟದಲ್ಲಿ ಭಾರತ ಮುಂದುವರಿಯುತ್ತಿರುವ ರಾಷ್ಟ್ರವಾಗಿದ್ದರೂ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಲಂಚಗುಳಿತನವು ರಾಷ್ಟ್ರವನ್ನು ಸಂಕಷ್ಟಕ್ಕೀಡು ಮಾಡುವಂತಾಗಿದೆ ಎಂದು ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಕಳವಳ ವ್ಯಕ್ತಪಡಿಸಿದರು. 

Advertisement

ಇಲ್ಲಿನ ಕಿತ್ತೂರು ಚೆನ್ನಮ್ಮ ವೃತ್ತ ಬಳಿಯ ಈದ್ಗಾ ಮೈದಾನದಲ್ಲಿ ಪಾಲಿಕೆ ವತಿಯಿಂದ ಸ್ವಾತಂತ್ರೊತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ದೇಶವನ್ನು ಮಹಾತ್ಮ ಗಾಂಧಿ ಹಾಗೂ ಅನೇಕ ಮಹನೀಯರು ತಮ್ಮ  ನಿಸ್ವಾರ್ಥ ಸೇವೆ, ತ್ಯಾಗ, ಬಲಿದಾನ ಮೂಲಕ ಮುಕ್ತಗೊಳಿಸಿದರು. 

ಈಗ ಭಾರತವು ವಿಶ್ವಮಾನ್ಯ ಅಗ್ರಪಂಕ್ತಿಯತ್ತ ಸಾಗುತ್ತಿದೆ. ಜಗತ್ತಿನಲ್ಲೇ 3ನೇ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಿದೆ. ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದಿದೆ. ಆದರೂ ಅನಕ್ಷರತೆ, ದಾರಿದ್ರ್ಯ, ಮೂಢ ನಂಬಿಕೆಯಂತಹ ಕಂದಾಚಾರಗಳು ತೊಡಗಿಲ್ಲ.

ಆದ್ದರಿಂದ ನಾವೆಲ್ಲ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸು ಸಾಕಾರಗೊಳಿಸಲು ಇನ್ನಷ್ಟು ಶ್ರಮಿಸಬೇಕಾಗಿದೆ ಎಂದರು. ಮಹತ್ವಾಕಾಂಕ್ಷಿ ಸ್ಮಾಟ್‌ ìಸಿಟಿ ಯೋಜನೆಯಲ್ಲಿ ಅವಳಿ ನಗರವೂ ಸೇರ್ಪಡೆಗೊಂಡಿದ್ದು, ಜಗತ್ತಿನ ಹೆಸರಾಂತ ಕನ್ಸಲ್ಟಿಂಗ್‌  ಸಂಸ್ಥೆಯ ಪಾಲುದಾರಿಕೆಯೊಂದಿಗೆ 1662 ಕೋಟಿ ರೂ. ವೆಚ್ಚದಲ್ಲಿ 5 ವರ್ಷಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು.

ರಾಜ್ಯ ಸರಕಾರ ಮತ್ತು ವಿಶ್ವ ಬ್ಯಾಂಕ್‌ ನೆರವಿನೊಂದಿಗೆ ಪಾಲಿಕೆ ಎಲ್ಲ 67 ವಾರ್ಡ್‌ಗಲ್ಲಿ 1200 ಕೋಟಿ ರೂ. ವೆಚ್ಚದಲ್ಲಿ ನಿರಂತರ ನೀರು ಸರಬರಾಜು ಯೋಜನೆ ಕೈಗೊಳ್ಳಲಾಗುತ್ತಿದೆ.  ಅಮೃತ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳ ಕಾಮಗಾರಿ ನಡೆಯುತ್ತಿದೆ ಎಂದು ವಿವರಿಸಿದರು. 

Advertisement

ರಾಜ್ಯ ಸರಕಾರದ ವಿಶೇಷ  ಅನುದಾನದ 100 ಕೋಟಿ ರೂ. ಗಳಲ್ಲಿ 70 ಕೋಟಿ ರೂ. ಕಾಮಗಾರಿ ಮುಗಿದಿದೆ. ಇನ್ನು 22 ಕೋಟಿ ರೂ. ಕಾಮಗಾರಿಗೆ ಹಾಗೂ ಸೋಲಾರ್‌ ಟಾಪ್‌ ರೂμಂಗ್‌ಗೆ ಶೀಘ್ರವೇ ಟೆಂಡರ್‌ ಕರೆಯಲಾಗುವುದು. 35 ಕೋಟಿ ರೂ. ವೆಚ್ಚದಲ್ಲಿ ಗಣಕೀಕೃತ ಸ್ಮಾರ್ಟ್‌ ಲೈಟಿಂಗ್‌ ವ್ಯವಸ್ಥೆಯನ್ನು ಮುಂಬರುವ ತಿಂಗಳಲ್ಲಿ ಅನುಷ್ಠಾನ ಗೊಳಿಸಲಾಗುವುದು.

ಅವಳಿ ನಗರದ ಜನತೆಗೆ ಕಾಗದ ರಹಿತ, ನಗದು ರಹಿತ ಇ-ಆಡಳಿತ ಸೇವೆ  ನೀಡಲಾಗುವುದು. ಪಾಲಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅವಳಿ ನಗರದಲ್ಲಿ 40 ಸಾವಿರ ಸಸಿಗಳನ್ನು ನೆಡಲಾಗಿದೆ. ಬ್ಯಾನರ್‌, ಬಂಟಿಂಗ್ಸ್‌, ಫ್ಲೆಕ್ಸ್‌ ಮುಕ್ತ ನಗರವನ್ನಾಗಿಸಲಾಗುವುದು ಎಂದರು. 

ಸಂಸದ ಪ್ರಹ್ಲಾದ ಜೋಶಿ, ಶಾಸಕ ಪ್ರಸಾದ ಅಬ್ಬಯ್ಯ, ಮಹಾಪೌರ ಡಿ.ಕೆ. ಚವ್ಹಾಣ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಹೊರಕೇರಿ, ಸುಧೀರ ಸರಾಫ, ರಾಜಣ್ಣ ಕೊರವಿ, ಅಲ್ತಾಫ್‌ ಕಿತ್ತೂರ, ಮೋಹನ ಹಿರೇಮನಿ, ಶಿವು ಮೆಣಸಿನಕಾಯಿ, ಕೃಷ್ಣಾ ಗಂಡಗಾಳೇಕರ, ಲೀನಾ ಮಿಸ್ಕಿನ, ಎಸ್‌.ಎಚ್‌. ನರೇಗಲ್ಲ ಇತರರಿದ್ದರು. 

ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ: ಇದೇ ವೇಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ನಿಮಿತ್ತ ರಾಯಣ್ಣನ ಪ್ರತಿಮೆಗೆ ಪಾಲಿಕೆಯಿಂದ ಮಹಾಪೌರ ಡಿ.ಕೆ. ಚವ್ಹಾಣ ಮಾಲಾರ್ಪಣೆ ಮಾಡಿದರು.  

Advertisement

Udayavani is now on Telegram. Click here to join our channel and stay updated with the latest news.

Next