Advertisement

ದೇಶದಲ್ಲಿ ಸಿದ್ಧಗೊಳ್ಳಲಿದೆ ಆನೆಗಳ ಅಭಯಾರಣ್ಯ : ಹುಲಿ ಅಭಯಾರಣ್ಯದ ಮಾದರಿಯಲ್ಲಿ ಬರಲಿದೆ ನಿಯಮ

12:37 PM Oct 06, 2020 | sudhir |

ರಾಂಚಿ/ಕೋಲ್ಕತಾ: ಹುಲಿಅಭಯಾರಣ್ಯಗಳ ಮಾದರಿಯಲ್ಲಿಯೇ ದೇಶದಲ್ಲಿ ಆನೆಗಳಿಗೇ ಮೀಸಲಾಗಿರುವ ಅರಣ್ಯ ಪ್ರದೇಶ ರಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಆನೆಗಳು ಮತ್ತು ಮಾನವರ ನಡುವಿನ ಸಂಘರ್ಷಕ್ಕೆ ಮುಕ್ತಾಯ ಹಾಕುವ ಪ್ರಯತ್ನ ಶುರುವಾಗಿದೆ. ಅದಕ್ಕಾಗಿ 1972ರವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಲುಕೇಂದ್ರ ಪರಿಸರ ಸಚಿವಾಲಯ ಪ್ರಸ್ತಾವನೆ ಮುಂದಿಟ್ಟಿದೆ. ಆನೆಗಳ ಸಂಖ್ಯೆ ಹೆಚ್ಚಾಗಿರುವಕರ್ನಾಟಕ ಸೇರಿದಂತೆ ಹತ್ತು ರಾಜ್ಯ ಸರ್ಕಾರಗಳಿಂದ ಈ ಬಗ್ಗೆ ಸಲಹೆಗಳನ್ನು ಆಹ್ವಾನಿಸಿದೆ.

Advertisement

ಹುಲಿಅಭಯಾರಣ್ಯಕ್ಕೆ ರಾಜ್ಯ ಸರ್ಕಾರಗಳು ಸಿದ್ಧಪಡಿಸಿದ ನಿಯಮಾವಳಿಗಳಂತೆಯೇ ಆನೆಗಳ ಅಭಯಾರಣ್ಯ ಸ್ಥಾಪನೆಗೆ ನಿಯಮ ರಚಿಸಬೇಕು. ಅದರ ಅನ್ವಯ ಹದಿನೈದು ರಾಜ್ಯಗಳಲ್ಲಿ ಆನೆ ಅಭಯಾರಣ್ಯ ಸ್ಥಾಪನೆ ಮಾಡಬೇಕು ಎನ್ನುವುದು ಆಶಯ. ದೇಶದಲ್ಲಿ ಸುಮಾರು30 ಸಾವಿರಆನೆಗಳು ಇವೆ.ಅಂದರೆ ಜಗತ್ತಿನ ಶೇ.60ರಷ್ಟು ಆನೆಗಳು, ಅದರಲ್ಲೂ ಏಷ್ಯಾ ವಲಯದಲ್ಲಿ ಕಂಡುಬರುವವುಗಳು ನಮ್ಮ ದೇಶದಲ್ಲಿಯೇ ಇವೆ. 2019ರಲ್ಲಿ ರಾಷ್ಟ್ರೀಯ ಆನೆ ಕಾರ್ಯ ಯೋಜನೆ ಸಿದ್ಧಪಡಿಸಲು ಸಮಿತಿ ರಚಿಸಲಾಗಿತ್ತು. ಅದೇ ವರ್ಷದ ನವೆಂಬರ್‌ ನಲ್ಲಿ ಸಭೆ ನಡೆಸಿತ್ತು. “ಜಗತ್ತಿನ ಯಾವುದೇ ದೇಶದಲ್ಲಿ ಆನೆಗಳಿಗಾಗಿ ಅಭಯಾರಣ್ಯ ರಚಿಸಿಲ್ಲ. ಆದರೆ ನಮ್ಮ ದೇಶಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಆನೆಗಳಿರುವ ಬಾಂಗ್ಲಾದೇಶ, ನೇಪಾಳದಂಥ ರಾಷ್ಟ್ರಗಳು ಅವುಗಳದ್ದೇ ಆಗಿರುವ ಕಾರ್ಯಯೋಜನೆ ಸಿದ್ಧಪಡಿಸಿವೆ’ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ
ಸಚಿವಾಲಯದಲ್ಲಿ ಆನೆಗಳ ವಿಭಾಗದಲ್ಲಿ ರಾಷ್ಟ್ರೀಯ ಸಂಚಾಲಕರಾಗಿರುವ ಪ್ರಜ್ಞಾ ಪಾಂಡಾ ಹೇಳಿದ್ದಾರೆ.

ಇದನ್ನೂ ಓದಿ :ಅರೆಬೆಂದ ಅನ್ನದಂತಾದ ಆಹಾರ ಉದ್ಯಮ : ಉತ್ಪಾದನೆಯೂ ಕುಸಿತ – ವಹಿವಾಟೂ ಕುಂಠಿತ

ಯಾವೆಲ್ಲ ರಾಜ್ಯಗಳು?
ಒಡಿಶಾ, ಪಶ್ಚಿಮ ಬಂಗಾಳದ ದಕ್ಷಿಣ ಭಾಗ, ಛತ್ತೀಸ್‌ಘಡ, ಜಾರ್ಖಂಡ್‌, ಬಿಹಾರ, ಆಂಧ್ರಪ್ರದೇಶದ ಉತ್ತರ ಭಾಗ ಮತ್ತು ದಕ್ಷಿಣ ಭಾಗ, ತಮಿಳುನಾಡು, ಕರ್ನಾಟಕ,ಕೇರಳ, ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ವಲಯಗಳನ್ನು ಆನೆಗಳ ಅಭಯಾರಣ್ಯ ರಚಿಸಲು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next