Advertisement

ಚಿಕ್ಕಮಗಳೂರು: ಆನೆ ದಂತ ಕಳ್ಳ ಸಾಗಣೆ, ನಾಲ್ವರನ್ನು ಬಂಧಿಸಿದ ಪೊಲೀಸರು

02:08 PM Feb 29, 2020 | Mithun PG |

ಚಿಕ್ಕಮಗಳೂರು: ನಗರದ ವಸ್ತಾರೆ ಬಳಿ ಕಾರಿನಲ್ಲಿ ಆನೆದಂತ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಶೃಂಗೇರಿ ಮೂಲದ ಶಬರೀಶ್, ಯೋಗೇಶ್, ವಿಜಯ್, ಮಧುಸೂದನ್ ಬಂಧನಕ್ಕೊಳಗಾದವರು.

ಇನ್ಸ್ ಪೆಕ್ಟರ್ ಸತ್ಯನಾರಾಯಣ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಆನೆದಂತ ಸೇರಿ ಸೆಲಾರಿಯೋ ಕಾರು ವಶಪಡಿಸಿಕೊಂಡಿದ್ದಾರೆ.

ಗ್ರಾಮಾಂತರ ಪೊಲೀಸರ ವಶದಲ್ಲಿ ಆರೋಪಿಗಳು ಇದ್ದರೂ ಅರಣ್ಯ ಇಲಾಖೆ ಹಾಗೂ ಪೊಲೀಸ್ ನಡುವೆ ಪ್ರಕರಣ ದಾಖಲಿಸುವವರು ಯಾರು ಎಂದು ಗೊಂದಲ ಮೂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next