Advertisement

ಹಾಡುಹಗಲೇ ಗ್ರಾಮದಲ್ಲಿ ಕಾಡಾನೆ ಸಂಚಾರ: ಜನರಲ್ಲಿ ಆತಂಕ

12:04 PM Mar 22, 2022 | Team Udayavani |

ಸಕಲೇಶಪುರ:  ತಾಲೂಕಿನ‌ ಹಲಸುಲಿಗೆ ಗ್ರಾಮದಲ್ಲಿ ಹಾಡು ಹಗಲೆ ಕಾಡಾನೆಯೊಂದು ಸಂಚರಿಸಿ ಜನರಲ್ಲಿ ಆತಂಕ ಹುಟ್ಟುಹಾಕಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

Advertisement

ತಾಲೂಕಿನ‌ ಹಲಸುಲಿಗೆ ಗ್ರಾಮದ ಪಾಪಣ್ಣ ಎಂಬುವರ ಮನೆ ಮುಂದೆ ಆಗಮಿಸಿ ಕೆಲ ಕಾಲ ನಿಂತು ಹಲಸುಲಿಗೆ ಮುಖ್ಯ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಿದೆ. ಅದೃಷ್ಟವಷಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಕೆಲದಿನಗಳ ಹಿಂದಷ್ಟೇ ಬೇಲೂರು ತಾಲೂಕಿನ‌ ಕಡೆಗರ್ಜೆಯಲ್ಲಿ ಕಾಡಾನೆಯೊಂದು ಇಬ್ಬರು ಕೂಲಿ ಕಾರ್ಮಿಕರನ್ನು ಕೊಂದಿತ್ತು. ಈ ಘಟನೆ ಮಾಸುವ ಮೊದಲೇ ಕಾಡಾನೆಗಳು ಸಕಲೇಶಪುರ, ಬೇಲೂರು, ಆಲೂರು ತಾಲೂಕಿನ ಕೆಲವೆಡೆ ತಿರುಗಾಡುತ್ತಿವೆ.

ಇದನ್ನೂ ಓದಿ:ಜಾತ್ರೆಯಲ್ಲಿ ಯುವಕರಿಂದ  ಸನ್ನಿ ಲಿಯೋನ್ ಫ್ಲೆಕ್ಸ್: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಕಾಡಾನೆ ಹಾವಳಿ ತಾಲೂಕಿನಲ್ಲಿ ಮಿತಿ ಮೀರಿದ್ದು, ಹಾಡು ಹಗಲೆ ಕಾಡಾನೆಗಳ ಹಿಂಡು ಗ್ರಾಮಗಳಿಗೆ ಬರುತ್ತಿರುವುದು ಗ್ರಾಮಸ್ಥರಲ್ಲಿ ಭೀತಿ ಹುಟ್ಟು ಹಾಕುತ್ತಿದೆ. ಕಾಡಾನೆ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಂಡು ಹಿಡಿಯಲು ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next