Advertisement

ಆನೆ ದಂತ ನಾಪತ್ತೆ ಪ್ರಕರಣ:ಕಡೆಗೂ ದೂರು ದಾಖಲು

07:05 AM Jun 03, 2018 | Team Udayavani |

ಶಿವಮೊಗ್ಗ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ನಗರದ ಎಸ್‌ಪಿ ಕಚೇರಿಯ ಜೋಡಿ ಆನೆ ದಂತ ನಾಪತ್ತೆ ಪ್ರಕರಣದ ಕುರಿತು ಯಾವುದೇ ಸುಳಿವು ಇದುವರೆಗೆ ಪೊಲೀಸರಿಗೆ ಸಿಕ್ಕಿಲ್ಲ.

Advertisement

ಹೀಗಾಗಿ ಸುಮಾರು ಒಂದು ವರ್ಷದ ಬಳಿಕ ಈ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು
ದಾಖಲಿಸಿಕೊಂಡಿದ್ದಾರೆ.

ಎಸ್‌ಪಿ ಕಚೇರಿಯ ರಹಸ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟೆನೋಗ್ರಾಫರ್‌ ಎ.ಬಿ. ಶ್ರೀನಾಥ್‌ ಎಂಬುವವರು ದೂರು ದಾಖಲಿಸಿದ್ದಾರೆ.

ಈ ಜೋಡಿ ದಂತಗಳು 2015ರಲ್ಲಿ ನಾಪತ್ತೆಯಾಗಿರಬಹುದು ಎನ್ನಲಾಗಿದ್ದು, ಕಳೆದ ವರ್ಷ ಅಂದರೆ 2017ರ ಜೂನ್‌ 28ರಂದು ಹೊರ ಜಗತ್ತಿಗೆ ಗೊತ್ತಾಗಿತ್ತು. ಆದರೆ ಪೊಲೀಸ್‌ ಇಲಾಖೆಗೆ ಜೂನ್‌ 28ಕ್ಕೆ ಒಂದು ತಿಂಗಳ ಮೊದಲೇ ಗೊತ್ತಾಗಿದ್ದು, ಈ ಸಂಬಂಧ ಮಾಹಿತಿ ಸಂಗ್ರಹಿಸುವಷ್ಟರಲ್ಲಿ ಪತ್ರಿಕೆ ಗಳಲ್ಲಿ ಇದು ಪ್ರಕಟ ಗೊಂಡಿದ್ದರಿಂದ ಇಲಾಖೆ
ಅಧಿಕೃತವಾಗಿ ನಾಪತ್ತೆಯಾಗಿರುವುದನ್ನು ಒಪ್ಪಿಕೊಂಡು ಇಲಾಖಾ ವಿಚಾರಣೆ ಆರಂಭಿಸಿತ್ತು. ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು ತನಿಖೆ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗದೆ ಕೈ ಚೆಲ್ಲಿದರು.

ಈ ಸಂಬಂಧ ಯಾವುದೇ ಮಾಹಿತಿ ಕೂಡ ಸಿಗಲಿಲ್ಲ. ಹೀಗಾಗಿ ಅಂತಿಮವಾಗಿ 22-5-2018ರಂದು ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಈ ದಂತ ಕಳವು ಪ್ರಕರಣದ ಕುರಿತು ಅಧಿಕೃತವಾಗಿ ದೂರು ದಾಖಲಿಸಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next