Advertisement

ಆನೆಗಳ ದಾಳಿಗೆ ಅರಣ್ಯ ಸಿಬ್ಬಂದಿ ಸೇರಿ ಇಬ್ಬರು ಸಾವು

10:55 PM Mar 02, 2020 | Lakshmi GovindaRaj |

ಮಾಲೂರು/ಮಾಸ್ತಿ: ತಾಲೂಕಿನ ಗಡಿಭಾಗ ನೂಟವೆ ಗ್ರಾಮದಲ್ಲಿ ಬಿಡು ಬಿಟ್ಟಿದ ಆನೆಗಳ ದಾಳಿಗೆ ಅರಣ್ಯ ಸಿಬ್ಬಂದಿ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಓರ್ವ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

Advertisement

ಮೃತರನ್ನು ತಮಿಳುನಾಡು ರಾಜ್ಯದ ಗಡಿಗ್ರಾಮ ಗುಡೇಗೌಡನಹಳ್ಳಿಯ ಗುಟ್ಟಮುನಿಯಪ್ಪ ( 55) ಹಾಗೂ ಕೊಮ್ಮನಹಳ್ಳಿಯ ಆನಂದಯ್ಯ(40) ಎಂದು ಗುರುತಿಸಲಾಗಿದೆ. ಬಂಗಾರಪೇಟೆ ತಾಲೂಕಿನ ಬೂದಿ ಕೋಟೆ ಸಮೀಪದ ಎಳೆಸಂದ್ರ ಗ್ರಾಮದ ಬಳಿಯಲ್ಲಿ 30 ಆನೆ ಬೀಡುಬಿಟ್ಟಿದ್ದವು. ರಾತ್ರಿಯೇ ಅಲ್ಲಿಂದ ಹೊರಟು ತಾಲೂಕಿನ ಟೇಕಲ್‌ ಹೋಬಳಿಯ ನೂಟವೆ ಗ್ರಾಮದ ಬಳಿಯ ಜಿ.ಗೊಲ್ಲಹಳ್ಳಿ ಸಮೀಪಕ್ಕೆ ಆಗಮಿಸಿವೆ.

ಈ ಆನೆಗಳು ಬಂದಿರುವ ಸುದ್ದಿ ತಿಳಿದು, ಗ್ರಾಮ ಸಮೀಪದಲ್ಲಿಯೇ ನಡೆಯುತ್ತಿದ್ದ ಜಾತ್ರೆಯಲ್ಲಿ ಪಾಲ್ಗೊಂ ಡಿದ್ದ ಜನರು ಆನೆಗಳು ಬಿಡುಬಿಟ್ಟಿರುವ ಸ್ಥಳಕ್ಕೆ ತಂಡೋಪ ತಂಡವಾಗಿ ಆಗಮಿಸಿದ್ದಾರೆ. ಗಲಾಟೆ ಮಾಡುವುದು, ಕಲ್ಲು ಹೊಡೆಯುವುದು, ಮೊಬೈಲ್‌ ಕ್ಯಾಮೆರಾದಲ್ಲಿ ಫೋಟೋ ತೆಗೆಯಲು ಮುಂದೆ ಹೋಗು ವುದು ಇನ್ನಿತರ ಚೇಷ್ಟೆ ಮಾಡಲು ಆರಂಭಿಸಿ ದ್ದಾರೆ. ಇದರಿಂದ ರೊಚ್ಚಿಗೆದ್ದ ಆನೆಗಳು ದಾಳಿ ಮಾಡಲು ಆರಂಭಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next