Advertisement

ಬನ್ನೇರುಘಟ್ಟ:ಯುವ ಕಾಂಗ್ರೆಸ್‌ ಕಾರ್ಯಕರ್ತನ ಭೀಕರ ಹತ್ಯೆ

12:05 PM Jan 05, 2018 | Team Udayavani |

ಬೆಂಗಳೂರು: ನಗರದ ಹೊರವಲಯದ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಹುಲುವಳ್ಳಿ ಬಳಿ  ಶುಕ್ರವಾರ ಹಾಡಹಗಲೇ ವ್ಯಕ್ತಿಯೊಬ್ಬರನ್ನು ಅಟ್ಟಾಡಿಸಿ ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈಯಲಾಗಿದೆ.

Advertisement

ಹತ್ಯೆಗೀಡಾದ ವ್ಯಕ್ತಿ ಸತೀಶ್‌ ರೆಡ್ಡಿ(28) ಎನ್ನುವವರಾಗಿದ್ದು ,  9 ಗಂಟೆಯ ವೇಳೆಗೆ  ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಕಂಪೆನಿಗೆ ಪತ್ನಿಯನ್ನು ಬಿಟ್ಟು  ವಾಪಾಸ್‌ ಕಲ್ಕೆರೆಯ ಮನೆಗೆ ಬೈಕ್‌ನಲ್ಲಿ  ತೆರಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಅಡ್ಡಗಟ್ಟಿ  ಅಟ್ಟಾಡಿಸಿಕೊಂಡು  ಕೊಚ್ಚಿ ಕೊಲೆ ಗೈದು ಪರಾರಿಯಾಗಿದ್ದಾರೆ. 

ಕೊಲೆಗೆ ಹಳೆ ದ್ವೇಷ ಕಾರಣ ಎನ್ನಲಾಗಿದ್ದು, ಸತೀಶ್‌ ರೆಡ್ಡಿ  ಹಿಂದೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದು, ಸಂಸದ ಡಿ.ಕೆ.ಸುರೇಶ್‌ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. 

ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next