Advertisement

ವಿದ್ಯುತ್ ಅವಘಡ: ತಪ್ಪಿದ ಭಾರಿ ಅನಾಹುತ: 72 ಮನೆಗಳಿಗೆ ಹಾನಿ: ಗೃಹೋಪಯೋಗಿ ವಸ್ತುಗಳು ಭಸ್ಮ

08:59 PM Jul 30, 2023 | Team Udayavani |

ಕುಣಿಗಲ್ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಪಡೆದಿದ್ದ 72 ಮನೆಗಳ ವಿದ್ಯುತ್ ಮೀಟರ್, ಗೃಹೋಪಯೋಗಿ ವಸ್ತುಗಳಿಗೆ ಸುಟ್ಟು ಅಪಾರ ಹಾನಿಯಾಗಿ, ಎಮ್ಮೆ ಮೃತಪಟ್ಟು, ಮಹಿಳೆಯೋರ್ವಳು ಗಾಯಗೊಂಡು, ಗ್ರಾಮವೇ ಬೆಚ್ಚುಬಿದ್ದ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಎಲೆಕಡಕಲು ಗ್ರಾಮದಲ್ಲಿ ಭಾನುವಾರ ನಡೆದಿದೆ,

Advertisement

ಎಲೆಕಡಕಲು ಗ್ರಾಮದಲ್ಲಿ ಹಲವು ವರ್ಷಗಳಿಂದ ಸುಮಾರು 80 ಮನೆಗಳಿಗೆ ನಿರಂತರ ಜ್ಯೋತಿ ಯೋಜನಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.ಭಾನುವಾರ ಗ್ರಾಮದಲ್ಲಿ ಹಾದು ಹೊಗಿದ್ದ 11 ಕೆ.ವಿ ವಿದ್ಯುತ್ ಲೈನ್ ತುಂಡಾಗಿ, ನಿರಂತರ ಜ್ಯೋತಿ ಯೋಜನೆಗೆ ಅಳವಡಿಸಿದ ಲೈನ್ ಮೇಲೆ ಬಿದ್ದ ಕಾರಣ ಹೈ ವೋಲ್ಟೇಜ್ ಪಾಸ್ ಆಗಿ ಗ್ರಾಮದ ಮನೆಗಳ ಮೀಟರ್, ಟಿ.ವಿ, ವಾರ್ಷಿಂಗ್ ಮಿಷನ್, ಫ್ರಿಜ್, ಬಲ್ಬ್, ಮನೆಯ ವಿದ್ಯುತ್ ವೈರಿಂಗ್ ಸುಟ್ಟು ಕರಕಲಾಗಿವೆ.

ಕಂಪಿಸಿದ ಭೂಮಿ : ಹೈ ವೋಲ್ಟೇಜ್‌ಗೆ ಕೆಲ ಮನೆಗಳ ನೆಲ ಸಹ ಕಂಪಿಸಿದ್ದು ಗ್ರಾಮಸ್ಥರು ಮನೆಯಿಂದ ಹೊರಗೆ ಓಡಿ ಬಂದು ತಮ್ಮ ಪ್ರಾಣ ರಕ್ಷಿಸಿಕೊಂಡಿದ್ದಾರೆ, ಗ್ರಾಮದ ಪುಟ್ಟತಾಯಮ್ಮ ಎಂಬುವ ಕೈಗೆ ವಿದ್ಯುತ್ ಸ್ಪರ್ಷಿಸಿದ್ದು ಗಾಯಗೊಂಡಿದ್ದಾರೆ.

ನರಳಿ ಸತ್ತ ಎಮ್ಮೆ : ಗ್ರಾಮದ ರಮೇಶ್ ಎಂಬುವರು ಮನೆಯ ಮುಂಭಾಗದ ಲೈಕ್ ಕಂಬದ ಪಕ್ಕದಲ್ಲಿ ಎಮ್ಮೆಯನ್ನು ಕಟ್ಟಿಹಾಕಲಾಯಿತು, ವಿದ್ಯುತ್ ಸ್ಪರ್ಶಕ್ಕೆ ಎಮ್ಮೆ ನರಳಿ ನರಳಿ ಸತ್ತಿದೆ.ಇದೇ ವೇಳೆ ಮನೆ ಹೊರಗೆ ಮರದ ಗೂಡಕ್ಕೆ ಕಟ್ಟಿದ ಹಸು, ಕರು, ಮೇಕೆಯ ಕತ್ತಿನ ಹಗ್ಗವನ್ನು ಕುಡುಗೋಲಿನಿಂದ ಕ್ಯೋಂದು ಅವುಗಳನ್ನು ರಕ್ಷಣೆ ಮಾಡಿದ್ದಾರೆ.

ಬೆಸ್ಕಾಂ ನಿರ್ಲಕ್ಷ್ಯ ಆರೋಪ : ಇದೇ ರೀತಿ ಹಲವು ಭಾರಿ ಗ್ರಾಮದಲ್ಲಿ ಹೈವೋಲ್ಟೇಜ್ ಸಂಭವಿಸಿ ಮನೆಯ ವಿದ್ಯುತ್ ದೀಪಗಳು ಹೊಡೆದು ಹೋಗಿದ್ದವು, ಈ ಸಂಬಂಧ ಹಲವು ಭಾರಿ ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ, ಇದರಿಂದ ಭಾನುವಾರ ಮತ್ತೊಂದು ದೊಡ್ಡ ಅನಾಹುತವೇ ಸಂಭವಿಸಿದೆ ಎಂದು ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ. ತಪ್ಪಿಸ್ಥ ಬೆಸ್ಕಾಂ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕೆಂದು ಆಗ್ರಹಪಡಿಸಿದ್ದಾರೆ.

Advertisement

ಕತ್ತಲಲ್ಲಿ ಜನ : ವಿದ್ಯುತ್ ಅವಘಡದಿಂದ ಗ್ರಾಮದ ಹಲವು ಮನೆಗಳಲ್ಲಿ ವಿದ್ಯುತ್ ಮೀಟರ್ ಬೋರ್ಟ್ ಹಾಗೂ ವೈರಿಂಗ್ ಸುಟ್ಟು ಹೋದ ಕಾರಣ ಇಡೀ ರಾತ್ರಿ ಜನರು ಕತ್ತಲಲ್ಲಿ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸ್ಥಳಕ್ಕೆ ಅಧಿಕಾರಿಗಳ ದೌಡು : ಘಟನೆ ನಡೆದ ಎಲೆಕಡಕಲು ಗ್ರಾಮಕ್ಕೆ ಡಿವೈಎಸ್‌ಪಿ, ಲಕ್ಷ್ಮಿಕಾಂತ್, ಬೆಸ್ಮಾಂ ಎಇಇ ವೀರಭದ್ರಾಚಾರ್ ಭೇಟಿ ನೀಡಿ ಘಟನೆ ಸಂಬಂಧ ಕ್ರಮಕೈಗೊಂಡು ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ.

ಪರಿಹಾರಕ್ಕೆ ಒತ್ತಾಯ : ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೆಚ್.ಡಿ.ರಾಜೇಶ್‌ಗೌಡ ಘಟನೆಯನ್ನು ಪರಿಶೀಲಿಸಿದರು. ಅಧಿಕಾರಿಗಳ ಎಡವಟ್ಟಿನಿಂದ್ದಾಗಿ ಇಂತಹ ದುರಂತಗಳು ಸಂಬವಿಸುತ್ತಿವೆ. ಗ್ರಾಮಸ್ಥರು ಎಚ್ಚರಗೊಳ್ಳದಿದ್ದರೇ ಭಾರಿ ಅನಾಹುತ ಆಗುತಿತ್ತು ಇದಕ್ಕೆ ಯಾರನ್ನೂ ಕಾರಣರಾಗಿ ಮಾಡಬೇಕೆಂದು ಕಿಡಿಕಾರಿದರು. ತಕ್ಷಣ ಬೆಸ್ಕಾಂ ಹಿರಿಯ ಅಧಿಕಾರಿಗಳು ಅನಾಹುತ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಆಗಿರುವ ನಷ್ಟವನ್ನು ಪರಿಶೀಲಿಸಿ ಅವರಿಗೆ ಸೂಕ್ತ ಪರಿಹಾರ ಕೋಡಬೇಕೆಂದು ಒತ್ತಾಯಿಸಿದರು.

11 ಕೆ.ವಿ ವಿದ್ಯುತ್ ಲೈನ್ ಕಟ್ಟಾಗಿ, ನಿರಂತಜ್ಯೋತಿ ಸರಬರಾಜಿನ ಲೈನ್ ಮೇಲೆ ಬಿದ್ದು ಹೈ ವೋಲ್ಟೇಜ್ ಪಾಸ್ ಆಗಿ ಕೆಲ ಮನೆಗಳಿಗೆ ತೊಂದರೆಯಾಗಿದೆ, ತಕ್ಷಣಕ್ಕೆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು, ಹಾನಿ ಸಂಬಂಧ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಪರಿಹಾರ ನೀಡುವ ಸಂಬಂಧ ಕ್ರಮಕೈಗೊಳ್ಳಲಾಗುವುದು
-ಪುರುಷೋತ್ತಮ್
ಬೆಸ್ಕಾಂ

Advertisement

Udayavani is now on Telegram. Click here to join our channel and stay updated with the latest news.

Next