Advertisement

ಚುನಾವಣೆ ಅಕ್ರಮಕ್ಕೆ ಹಣ ಬಿಡುಗಡೆ: ಎಚ್‌ಡಿಕೆ 

06:45 AM Apr 09, 2018 | Team Udayavani |

ಯಾದಗಿರಿ: ಗುತ್ತಿಗೆದಾರರಿಗೆ ಹಾಗೂ ವಿವಿಧ ಕಾಮಗಾರಿಗಳಿಗೆ ಕಳೆದ 4 ವರ್ಷದಲ್ಲಿ ಬಿಡುಗಡೆಯಾಗದ ಹಣವನ್ನು 3 ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ. 30 ಸಾವಿರ ಕೋಟಿ ರೂ.ಹಣ ಬಿಡುಗಡೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

Advertisement

ಗುರುಮಠಕಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಅಕ್ರಮ ನಡೆಸುವುದಕ್ಕಾಗಿ ಈ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರ ತೆರಿಗೆ ಹಣ ಲೂಟಿ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. 

ಹೊಸ ನೀರಾವರಿ ಯೋಜನೆಗಳನ್ನು ರೂಪಿಸಬಹುದಾದಷ್ಟು ಹಣವನ್ನು ಅವುಗಳ ಪ್ಲಾಸ್ಟ್‌ರಿಂಗ್‌ಗೆ ಖರ್ಚು ಮಾಡಿದ್ದಾರೆ. ಪ್ರಚಾರಕ್ಕಾಗಿ ಜಾಹೀರಾತುಗಳಿಗೆ ಯಾವ ಸರ್ಕಾರದಲ್ಲಿಯೂ ಇಷ್ಟು ಹಣ ಖರ್ಚು ಆಗಿಲ್ಲ. ಜಾಹೀರಾತುಗಳಿಗೆ ಕಳೆದ ಬಾರಿಗಿಂತ 3 ಪಟ್ಟು ಖರ್ಚು ಹೆಚ್ಚಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next