Advertisement

ಅವಧಿಗೂ ಮುನ್ನವೇ ಚುನಾವಣೆ ಸಾಧ್ಯತೆ ಇಲ್ಲ

06:10 AM Jun 30, 2018 | Team Udayavani |

ನವದೆಹಲಿ: ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ನೋಡಿದರೆ, ಬಿಜೆಪಿ ಅವಧಿಗೂ ಮುನ್ನವೇ ಲೋಕಸಭಾ
ಚುನಾವಣೆಗೆ ಹೋಗುವ ಸಾಧ್ಯತೆ ಇಲ್ಲ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ
ಅಭಿಪ್ರಾಯಪಟ್ಟಿದ್ದಾರೆ. 

Advertisement

ಈ ಕುರಿತು ಶುಕ್ರವಾರ ನವದೆಹಲಿಯಲ್ಲಿ ಮಾತನಾಡಿದ ಅವರು, “ಅವಧಿಪೂರ್ವ ಚುನಾವಣೆ ಕುರಿತ ಬಿಜೆಪಿ ನಿಲುವು ಏನೆಂದು ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾದ ಬಳಿಕ ಸ್ಪಷ್ಟವಾಗಲಿದೆ. ನವೆಂಬರ್‌ ಅಥವಾ ಡಿಸೆಂಬರ್‌ ವೇಳೆಗೆ ಚುನಾವಣೆ ನಡೆಸಲು ಬಿಜೆಪಿ ಯೋಜನೆ ಹಾಕಿಕೊಂಡಿರಬಹುದು. ನವೆಂಬರ್‌ನಲ್ಲಿ ಕೆಲವು ರಾಜ್ಯಗಳಲ್ಲೂ ಚುನಾವಣೆ ಇರಲಿವೆ. ಅಲ್ಲದೆ, ಅವಧಿ ಪೂರ್ಣಗೊಂಡ ನಂತರ ಚುನಾವಣೆ ಎದುರಿಸಿದರೆ, ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ಲಾಭವಾಗಲಿದೆ ಎನ್ನುವುದು ಬಿಜೆಪಿಯ ಲೆಕ್ಕಾಚಾರ. ಒಟ್ಟಿನಲ್ಲಿ, ಈಗಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಅವಧಿಪೂರ್ವ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next