Advertisement

Election Update: ಟಿಕೆಟ್‌ ಸಿಗದಿದ್ದರೆ ಲಿಂಗಾಯತ ವಿರೋಧಿ ಪಟ್ಟ –ಯತ್ನಾಳ

09:57 PM Apr 16, 2023 | Team Udayavani |

ವಿಜಯಪುರ: ಲಿಂಗಾಯತ ಮತಗಳಿಂದ ಶಾಸಕರಾಗಿದ್ದೀರಿ. ಮುಖ್ಯಮಂತ್ರಿಯಾಗಿದ್ದೀರಿ. ಎಲ್ಲ ಅಧಿಕಾರವನ್ನೂ ಪಕ್ಷ ಕೊಟ್ಟಿದೆ. ಆದರೆ ಈಗ ಟಿಕೆಟ್‌ ಸಿಗದ್ದಕ್ಕೆ ಬಿಜೆಪಿ ಲಿಂಗಾಯತ ವಿರೋಧಿ ಎಂದರೆ ಹೇಗೆ ಎಂದು ಶೆಟ್ಟರ್‌ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ಧಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಕ್ಷ ವಿರೋಧಿಸಿ ಎಂದೂ ಮಾತನಾಡಲಿಲ್ಲ, ನನಗೂ ಉಚ್ಛಾಟನೆ ಮಾಡಲಾಗಿತ್ತು. ಈಗ ಕೆಲವೊಂದು ವಿಷಯ ಬಹಿರಂಗ ಪಡಿಸುತ್ತೇನೆಂದು ಶೆಟ್ಟರ ಹೇಳಿಕೆ ಒಂದು ರೀತಿ ಬ್ಲ್ಯಾಕ್‌ವೆುಲ್‌ ಅಷ್ಟೇ. ಈಶ್ವರಪ್ಪ ಅವರಿಗೂ ಟಿಕೆಟ್‌ ನಿರಾಕರಣೆ ಮಾಡಲಾಗಿದೆ. ಆದರೂ ಅವರು ಪಕ್ಷ ಸಂಘಟನೆ ಮಾಡಲು ಮುಂದಾಗಿಲ್ಲವೇ. ಈ ಮಾತು ನೆಹರು ಓಲೇಕಾರ್‌ ಅವರಿಗೂ ಅನ್ವಯವಾಗುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next