Advertisement

ಮತಎಣಿಕೆ; ಹಿಂಸಾಚಾರ ಭುಗಿಲೇಳಬಹುದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ; ರಾಜ್ಯಗಳಿಗೆ ಕೇಂದ್ರ

09:43 AM May 25, 2019 | Nagendra Trasi |

ನವದೆಹಲಿ:ದೇಶದ ಹೈವೋಲ್ಟೇಜ್ ಲೋಕಸಭೆ ಚುನಾವಣೆಯ ಮತಎಣಿಕೆ ಗುರುವಾರ ಬೆಳಗ್ಗೆ ನಡೆಯಲಿರುವ ಹಿನ್ನೆಲೆಯಲ್ಲಿ ಹಿಂಸಾಚಾರ, ಗಲಭೆ ನಡೆಯುವ ಸಾಧ್ಯತೆ ಇದೆ ಎಂದು ಗೃಹಸಚಿವಾಲಯ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಎಲ್ಲಾ ರಾಜ್ಯಗಳ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಸಂದೇಶ ರವಾನಿಸಿರುವುದಾಗಿ ವರದಿ ತಿಳಿಸಿದೆ.

Advertisement

ಮತಎಣಿಕೆ ಕಾರ್ಯ ಸ್ಥಗಿತಗೊಳಿಸುವ ಹಾಗೂ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇದ್ದು, ಕೇಂದ್ರಾಡಳಿ ಪ್ರದೇಶ ಹಾಗೂ ಆಯಾ ರಾಜ್ಯಗಳು ಸೂಕ್ತ ಭದ್ರತೆಯ ವ್ಯವಸ್ಥೆ ಮಾಡಬೇಕೆಂದು ಸಚಿವಾಲಯ ಹೇಳಿದೆ.

ಅಷ್ಟೇ ಅಲ್ಲ ಮತಎಣಿಕೆ ಕೇಂದ್ರದ ಸುತ್ತಮುತ್ತ, ಸ್ಟ್ರಾಂಗ್ ರೂಂ ಹಾಗೂ ಇವಿಎಂ ಇರಿಸಿದ ಸ್ಥಳಗಳಲ್ಲಿ ಸೂಕ್ತ ಭದ್ರತೆ ಏರ್ಪಡಿಸುವಂತೆ ಸಚಿವಾಲಯ ಸಂದೇಶ ರವಾನಿಸಿದೆ ಎಂದು ವರದಿ ವಿವರಿಸಿದೆ. ಉತ್ತರಪ್ರದೇಶ, ಪಶ್ಚಿಮಬಂಗಾಳ, ಬಿಹಾರ ಹಾಗೂ ತ್ರಿಪುರಾಗಳಲ್ಲಿ ಹಿಂಸಾಚಾರ ನಡೆಯುವ ಬಗ್ಗೆ ಸೆಂಟ್ರಲ್ ಸೆಕ್ಯುರಿಟಿ ಏಜೆನ್ಸಿ ಗಳು ಕೆಲವು ಮಾಹಿತಿ ಪಡೆದಿರುವುದಾಗಿ ವರದಿ ತಿಳಿಸಿದೆ.

ಮತಎಣಿಕೆಗೆ ಅವಕಾಶ ಕೊಡುವುದಿಲ್ಲ, ಹಿಂಸಾಚಾರ ನಡೆಸುತ್ತೇವೆ ಎಂದು ಕೆಲವು ಸಂಘಟನೆಗಳು ಹಾಗೂ ವೈಯಕ್ತಿಕವಾಗಿಯೂ ಹೇಳಿಕೆ ಕೊಟ್ಟಿರುವುದಾಗಿ ವರದಿ ಹೇಳಿದೆ

Advertisement

Udayavani is now on Telegram. Click here to join our channel and stay updated with the latest news.

Next