Advertisement

ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ: ವೆಂಕಟಾಪುರ ಗ್ರಾಪಂಗೆ ರೇಣುಕಾ 4ನೇ ಬಾರಿ ಅಧ್ಯಕ್ಷೆ

08:25 PM Aug 02, 2023 | Team Udayavani |

ಚಿಂಚೋಳಿ: ತಾಲೂಕಿನ ವೆಂಕಟಾಪುರ ಗ್ರಾಪಂನ ಎರಡನೇ ಅವಧಿ ಬುಧವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಪೆದ್ದಾತಾಂಡಾದ ರೇಣುಕಾ ರಾಜು ರಾಠೊಡ ಸತತವಾಗಿ ನಾಲ್ಕನೇ ಸಲ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಗೋಪಾಲ ರಾಮಚಂದ್ರ ಜಾಧವ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಭರ್ಜರಿ ಗೆಲುವು ಸಾಧಿಸಿ ತಮ್ಮ ಬೆಂಬಲಿಗರೊಂದಿಗೆ ವಿಜಯದ ನಗೆ ಬೀರಿದರು.

ವೆಂಕಟಾಪುರ ಗ್ರಾಪಂ ಅಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸಾಮಾನ್ಯ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ಹೆಚ್ಚು ನಾಮ ಪತ್ರ ‌ಸಲ್ಲಿಕೆ ಆಗದಿರುವ‌‌ ಕಾರಣ ‌ಇಬ್ಬರಿಗೂ ಅವಿರೋಧವಾಗಿ ಆಯ್ಕೆಯಾದರು ಎಂದು ‌ಚುನಾವಣಾಧಿಕಾರಿ ಸುಧಾರಾಣಿ ನಾಯಕ ‌ಫಲಿತಾಂಶ ಘೋಷಿಸಿದರು.

ಪಿಡಿಓ ರಾಮಕೃಷ್ಣ ಕೊರಡಂಪಳ್ಳಿ, ಸಂಗಮೇಶ,ಕಾರ್ಯದರ್ಶಿ ಭಾಗವಹಿಸಿದರು. ಚುನಾವಣೆಯಲ್ಲಿ ಸತತವಾಗಿ ನಾಲ್ಕು ಸಲ ಅವಿರೋಧವಾಗಿ ಆಯ್ಕೆಯಾದ ರೇಣುಕಾ ರಾಜು ರಾಠೋಡ ಅವರನ್ನು ಬಿಜೆಪಿ ಮುಖಂಡರು ಹೂಮಾಲೆ ಹಾಕಿ ಅಭಿನಂದಿಸಿದರು.

ರಾಜು ರಾಠೋಡ, ದಿವಾಕರ,ಗೋಪಾಲ ‌ಭಜಂತ್ರಿ, ಚಂದ್ರಶೆಟ್ಟಿ,ಕೆಎಮ ಬಾರಿ,ಶ್ರೀಮಂತ ಕಟ್ಟಿಮನಿ,ಭೀಮಶೆಟ್ಟಿ ಮುರುಡಾ,ರವಿಕುಮಾರ್ ರಾಠೋಡ‌‌‌ ಇತರರು ಭಾಗವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next