Advertisement

ಶಹಾಪುರ: ಮತ ಎಣಿಕೆ ಕೇಂದ್ರಕ್ಕೆ ಪಂಚ್‌- ಚಾಕು ತಂದ ಅಭ್ಯರ್ಥಿ ಮಗ

03:20 PM Dec 31, 2020 | Team Udayavani |

ಶಹಾಪುರ: ಚಾಕು ಮತ್ತು ಪಂಚ್‌ ಇಟ್ಟುಕೊಂಡ ವ್ಯಕ್ತಿಯೋರ್ವ ಮತ ಎಣಿಕೆ ಕೇಂದ್ರ ಪ್ರವೇಶಿಸುವ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ನಗರದ ಪ್ರಥಮ ದರ್ಜೆ ಕಾಲೇಜು ಮತ ಎಣಿಕೆ ಕೇಂದ್ರದಲ್ಲಿ ಬುಧವಾರ ನಡೆದಿದೆ. ಆರೋಪಿ ಹತ್ತಿರವಿದ್ದ ಪಂಚ್‌ ಹಾಗೂ ಚಾಕುವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ಆತನನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ. ಆರೋಪಿ ಸಗರ ಗ್ರಾಮದ ಮಹ್ಮದ್‌ ಅಶ ಕ್‌ ಎಂದು ತಿಳಿದು ಬಂದಿದೆ. ಈತ ತನ್ನ ತಾಯಿಯನ್ನು ಸಗರ ಗ್ರಾಪಂ ಚುನಾವಣೆಗೆ ನಿಲ್ಲಿಸಿದ್ದ ಎಂದು ತಿಳಿದು ಬಂದಿದೆ. ಆರೋಪಿ ಅಶ ಕ್‌ ಸಗರ ಗ್ರಾಮ ಘಟಕದ ಟಿಪ್ಪು ಸುಲ್ತಾನ್‌ ಸಂಘದ ಅಧ್ಯಕ್ಷರಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸೂಕ್ತ ತನಿಖೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

ಮತ ಎಣಿಕೆ ಕೇಂದ್ರದಲ್ಲಿ ನಿಂಬೆಹಣ್ಣು
ಶಹಾಪುರ: ಗ್ರಾಪಂ ಚುನಾವಣೆಗೆ ಸ್ಪ ರ್ಧಿಸಿದ್ದ ಅಭ್ಯರ್ಥಿಗಳು ಮತ್ತು ಅಭ್ಯರ್ಥಿಗಳ ಪರವಾದ ಏಜೆಂಟು ಎಣಿಕೆ ಕೇಂದ್ರಕ್ಕೆ
ತೆರಳುವಾಗಿ ಕೈಯಲ್ಲಿ ನಿಂಬೆಕಾಯಿ ಹಿಡಿದು ಪ್ರವೇಶ ಮಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ನಿಂಬೆಹಣ್ಣು
ವಶಕ್ಕೆ ಪಡೆದರು. ಬುಧವಾರ ಬೆಳಗ್ಗೆ ನಿಗದಿ ಪಡಿಸಿದ 7 ಗಂಟೆಗೆ ಅಭ್ಯರ್ಥಿಗಳು ಮತ್ತು ಏಜೆಂಟರಗಳಲ್ಲಿ ಹಲವರು ಕೈಯಲ್ಲಿ
ನಿಂಬೆಹಣ್ಣು ತಂದಿದ್ದರು. ಇದನ್ನು ಗಮನಿಸಿದ ಪೊಲೀಸರು, ನಿಂಬೆಹಣ್ಣು, ಗುಟ್ಕಾ, ಸಿಗರೇಟು ಸೇರಿದಂತೆ ಇತರೆ ವಸ್ತುಗಳನ್ನು
ವಶಕ್ಕೆ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next