Advertisement

ಶಿವಸೇನೆ ಚಿಹ್ನೆ ಸ್ತಂಭನಗೊಳಿಸಿದ ಕೇಂದ್ರ ಚುನಾವಣಾ ಆಯೋಗ

10:27 PM Oct 08, 2022 | Team Udayavani |

ಮುಂಬಯಿ: ಬಿಲ್ಲು-ಬಾಣವಿರುವ ಚಿಹ್ನೆ ನಮ್ಮದು ಎಂಬ ಶಿವಸೇನೆಯ ಎರಡು ಬಣಗಳ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದ್ದು, ಈ ಚಿಹ್ನೆಯನ್ನು ಕೇಂದ್ರ ಚುನಾವಣಾ ಆಯೋಗ ಸ್ತಂಭನಗೊಳಿಸಿದೆ.

Advertisement

ಈ ಚಿಹ್ನೆಗಾಗಿ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣ ಮತ್ತು ಮಾಜಿ ಸಿಎಂ ಉದ್ಧವ್‌ ಠಾಕ್ರೆ ಬಣದ ನಡುವೆ ಹೋರಾಟ ನಡೆಯುತ್ತಿತ್ತು. ಎರಡೂ ಬಣಗಳಿಗೂ ಶಾಕ್‌ ನೀಡಿರುವ ಆಯೋಗ ಯಾರಿಗೂ ಚಿಹ್ನೆಯನ್ನು ನೀಡಿಲ್ಲ. ಜತೆಗೆ ಎರಡೂ ಬಣಗಳು ಚಿಹ್ನೆಯನ್ನು ಬಳಸುವಂತಿಲ್ಲ ಎಂದು ತಾಕೀತು ಮಾಡಿದೆ.

ಕೆಲ ದಿನಗಳಲ್ಲಿ ಮುಂಬಯಿಯ ಪೂರ್ವ ಅಂಧೇರಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಆ ಚುನಾವಣೆಯಲ್ಲಿ ಬೇರೊಂದು ಚಿಹ್ನೆ ಬಳಸುವ ಪರಿಸ್ಥಿತಿ ಎರಡೂ ಬಣಗಳಿಗೆ ಎದುರಾಗಿದೆ.

ಏಕನಾಥ ಶಿಂಧೆ ಬಣವು ಎನ್‌ಸಿಬಿ ಮತ್ತು ಕಾಂಗ್ರೆಸ್‌ನೊಂದಿಗಿದ್ದ ಮೈತ್ರಿ ಮುರಿದುಕೊಂಡು ಬಿಜೆಪಿ ಜತೆ ಕೈ ಜೋಡಿಸಿ ಸರಕಾರ ರಚಿಸಿಕೊಂಡ ನಾಲ್ಕು ತಿಂಗಳ ಅನಂತರ ಈ ನಿರ್ಧಾರವನ್ನು ಚುನಾವಣ ಆಯೋಗ ತೆಗೆದುಕೊಂಡಿದೆ. ಪಕ್ಷ ಯಾರಿಗೆ ಸೇರಿದ್ದು ಎನ್ನುವುದರ ಬಗ್ಗೆ ಚುನಾವಣಾ ಆಯೋಗವು ನಿರ್ಧಾರ ತೆಗೆದುಕೊಳ್ಳಬಾರದು ಎಂದು ಉದ್ಧವ್‌ ಠಾಕ್ರೆ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆಯೇ ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next