Advertisement

ಮುದುಡಿದ ಎಲೆ, ಪಾಲಾದಳು ಅಮ್ಮ !

08:51 AM Mar 24, 2017 | Karthik A |

ಹೊಸದಿಲ್ಲಿ: ಹಸಿರಾಗಿದ್ದ ‘ಎರಡು ಎಲೆ’ ಬಂಡಾಯದ ಬಿಸಿಗೆ ಮುರುಟಿದೆ ! ಮಕ್ಕಳ ಗಲಾಟೆಯಲ್ಲಿ ‘ಅಮ್ಮ’ ಎರಡು ಪಾಲಾಗಿದ್ದಾಳೆ ! ಜಯಲಲಿತಾ ನಿಧನ ಹೊಂದಿದ ಮೂರೇ ತಿಂಗಳಲ್ಲಿ ಎಐಎಡಿಎಂಕೆಯ ದುಃಸ್ಥಿತಿ ಇದು. ‘ಎರಡು ಎಲೆ’ ಚಿಹ್ನೆಗಾಗಿ ಎಐಎಡಿಎಂಕೆ ಬಣಗಳ ನಡುವೆ ಏರ್ಪಟ್ಟಿದ್ದ ಗುದ್ದಾಟಕ್ಕೆ ಚುನಾ ವಣಾ ಆಯೋಗ ತೆರೆ ಎಳೆದಿದ್ದು, ಇಬ್ಬರಿಗೂ ಬೇರೆ ಬೇರೆ ಚಿಹ್ನೆ, ಹೆಸರುಗಳನ್ನು ದಯಪಾಲಿಸಿದೆ. ಶಶಿಕಲಾ ಬಣ ಇನ್ನು ‘ಎಐಎ ಡಿಎಂಕೆ (ಅಮ್ಮ)’ ಎಂಬ ಪಕ್ಷದ ಹೆಸರಿನಲ್ಲಿ ಸ್ಪರ್ಧಿಸಲಿದೆ. ಇದಕ್ಕೆ ಪಕ್ಷದ ಚಿಹ್ನೆ ‘ಟೋಪಿ’. ಹಾಗೆಯೇ ಒ. ಪನ್ನೀರ್‌ ಸೆಲ್ವಂ ಬಣ ‘ಎಐಎಡಿಎಂಕೆ (ಪುರುಚ್ಚಿ ತಲೈವಿ ಅಮ್ಮ)’ ಹೆಸರಿನಲ್ಲಿ ‘ವಿದ್ಯುತ್‌ ಕಂಬ’ ಚಿಹ್ನೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಲಿದೆ.

Advertisement

ಆರ್‌.ಕೆ. ನಗರ ಉಪಚುನಾವಣೆ ಸಂಬಂಧ ಎಐಎಡಿಎಂಕೆ ಬಣಗಳು ‘ಎರಡು ಎಲೆ’ ಚಿಹ್ನೆಯನ್ನು ತಮಗೇಬೇಕೆಂದು ಚುನಾವಣಾ ಆಯೋಗದ ಮುಂದೆ ಹೋಗಿದ್ದವು. ಬಣಗಳ ಅಭಿಪ್ರಾಯ ಆಲಿಸಿದ ಅನಂತರ ಆಯೋಗ, ‘ಎರಡು ಎಲೆ’ ಇಬ್ಬರಿಗೂ ನೀಡಲಾಗುವುದಿಲ್ಲ ಎಂದು ಸ್ತಂಭನ ಆದೇಶ ಹೊರಡಿಸಿ, ಹೊಸ ಚಿಹ್ನೆ ನೀಡುವುದಾಗಿ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next