Advertisement

ಎರಡೆಲೆ ಚಿಹ್ನೆ: ಪಳನಿ, ಪನ್ನೀರ್‌ ಬಣಕ್ಕೆ ಜಯ

07:25 AM Nov 24, 2017 | Team Udayavani |

ಚೆನ್ನೈ: ಎಐಎಡಿಎಂಕೆ ಪಕ್ಷದ ಎರಡೆಲೆ ಚಿಹ್ನೆಗಾಗಿ ನಡೆದ ಕಾದಾಟದಲ್ಲಿ ಕೊನೆಗೂ ಶಶಿಕಲಾ ಬಣಕ್ಕೆ ತೀವ್ರ ಮುಖಭಂಗವಾಗಿದೆ. ಪಕ್ಷದ ಚಿಹ್ನೆ ಸಿಎಂ ಪಳನಿಸ್ವಾಮಿ ನೇತೃತ್ವದ ಸಂಯುಕ್ತ ಅಣ್ಣಾಡಿಎಂಕೆ ಬಣಕ್ಕೆ ನೀಡಿ ಚುನಾವಣಾ ಆಯೋಗ ತೀರ್ಪು ನೀಡಿದೆ.

Advertisement

ಇದರಿಂದಾಗಿ ಪಕ್ಷವನ್ನು, ಚಿಹ್ನೆಯನ್ನು ಹೇಗಾದರೂ ಮಾಡಿ ತನ್ನ ವಶಕ್ಕೆ ಪಡೆಯಬೇಕು ಎಂಬ ಶಶಿಕಲಾ, ದಿನಕರನ್‌ ಯತ್ನ ವಿಫ‌ಲವಾಗಿದೆ. ಪಕ್ಷದ ಸಂಘಟನೆ, ಶಾಸಕರ ಬೆಂಬಲ ಪಳನಿ-ಪನ್ನೀರ್‌ ಬಣಕ್ಕೇ ಇರುವ ಹಿನ್ನೆಲೆಯಲ್ಲಿ ಅವರದ್ದೇ ನಿಜವಾದ ಬಣ ಎಂದು ಆಯೋಗ ಮಾನ್ಯ ಮಾಡಿದೆ. ತದನಂತರ ಮಾತಾಡಿದ ಸಿಎಂ ಪಳನಿ, ಪಕ್ಷದ ಪಾಲಿಗೆ ಇದು ಮರೆಯಲಾಗದ ದಿನ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next