Advertisement

ನೀತಿಸಂಹಿತೆ ಜಾರಿ: ಸರ್ಕಾರಿ ವಾಹನ ಬಿಟ್ಟು ಖಾಸಗಿ‌ ಕಾರು ಹತ್ತಿದ ಮೂವರು ಸಚಿವರು

01:57 PM Nov 30, 2020 | keerthan |

ರಾಯಚೂರು: ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಮೂವರು ಸಚಿವರು ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನಗಳಲ್ಲಿ ತೆರಳಿದರು.

Advertisement

ಮಸ್ಕಿ ಪಟ್ಟಣದಲ್ಲಿ ಬಿಜೆಪಿ ಗ್ರಾಮ ಸ್ವರಾಜ‌ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಬಿ.ಶ್ರೀರಾಮುಲು, ಆನಂದ್ ಸಿಂಗ್ ಆಗಮಿಸಿದ್ದರು.

ಇದನ್ನೂ ಓದಿ:ಶೀಘ್ರದಲ್ಲೇ ಸಂಪುಟ ವಿಸ್ತರಣೆ; ಕಾನೂನಾತ್ಮಕವಾಗಿ ಲಿಂಗಾಯತ ಓಬಿಸಿ ಸೇರ್ಪಡೆ: ಕಾರಜೋಳ

ಮಸ್ಕಿಯ ಭ್ರಮರಾಂಬಾ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿಗೆ ಸಚಿವ ಶ್ರೀರಾಮುಲು ಒಂದು ಖಾಸಗಿ ವಾಹನದಲ್ಲಿ ಬಂದರೆ, ಲಕ್ಷ್ಮಣ ಸವದಿ ಮತ್ತು ಆನಂದ ಸಿಂಗ್ ಮತ್ತೊಂದು ಖಾಸಗಿ ವಾಹನದಲ್ಲಿ ವೇದಿಕೆಗೆ ಆಗಮಿಸಿದರು.

ಇದನ್ನೂ ಓದಿ: ಗ್ರಾ.ಪಂ ಚುನಾವಣೆಗೆ ದಿನ ನಿಗದಿ:ಯಾವ ತಾಲೂಕಿನಲ್ಲಿ ಯಾವಾಗ ಚುನಾವಣೆ?ಇಲ್ಲಿದೆ ಸಂಪೂರ್ಣ ಪಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next