Advertisement

ಚುನಾವಣೆ: ಗಡಿಭಾಗದಲ್ಲಿ ಎಎನ್‌ಎಫ್ ಶೋಧ

11:41 PM Mar 25, 2019 | Team Udayavani |

ಸಂಪಾಜೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಗಡಿಭಾಗಗಳ ಅರಣ್ಯ ಪ್ರದೇಶಗಳಲ್ಲಿ ಎಎನ್‌ಎಫ್ ಕೂಂಬಿಂಗ್‌ ಚುರುಕುಗೊಳಿಸಿದೆ.

Advertisement

ಸಂಪಾಜೆ ಅರೆಕಲ್ಲು, ಕೊಲ್ಲಮೊಗ್ರು, ಕೂಜಿಮಲೆ, ಕಲ್ಮಕಾರು, ಸುಬ್ರಹ್ಮಣ್ಯ, ಕುಲ್ಕುಂದ, ಬಾಗಿಮಲೆ, ಬಿಸಿಲೆ ಘಾಟಿ ಪ್ರದೇಶ ಗಳ ಅರಣ್ಯಗಳಲ್ಲಿ ಎಎನ್‌ಎಫ್ ಪಡೆ ಕಳೆದ ಕೆಲವು ದಿನಗಳಿಂದ ನಿರಂತರ ಕೂಂಬಿಂಗ್‌ ಕೈಗೊಂಡಿದೆ.

ನಕ್ಸಲರು ಈ ಹಿಂದೆ ಭೇಟಿ ನೀಡಿದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಬಂದೋಬಸ್ತ್ ಏರ್ಪಡಿಸುವ ದೃಷ್ಟಿಯಿಂದ ಮತ್ತು ನಕ್ಸಲ್‌ ಚಟುವಟಿಕೆ ಇಲ್ಲ ಎನ್ನುವು ದನ್ನು ಖಚಿತಪಡಿಸಿಕೊಳ್ಳಲು ಕೂಂಬಿಂಗ್‌ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆ
ಕಾರ್ಕಳ ಎಎನ್‌ಎಫ್ ತಂಡದ 15ಕ್ಕೂ ಅಧಿಕ ಯೋಧರು ಕೂಂಬಿಂಗ್‌ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೇರಳ ಮತ್ತು ಕೊಡಗು ಜಿಲ್ಲೆಯ ಗಡಿಭಾಗಗಳಲ್ಲಿ ಎಎನ್‌ಎಫ್ ಕಾರ್ಯಾಚರಣೆ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next