Advertisement

Election 2023: ಮಂಗಳೂರು ಕ್ಷೇತ್ರದ ಬಿಜೆಪಿಯಿಂದ ಒಗ್ಗಟ್ಟು ಪ್ರದರ್ಶನ

05:20 PM Apr 13, 2023 | Team Udayavani |

ಮಂಗಳೂರು: ಹಲವು ಕಡೆ ಟಿಕೆಟ್ ವಂಚಿತರು ಆಕ್ರೋಶ, ಬೇಸರ, ಪಕ್ಷತ್ಯಾಗ ಇತ್ಯಾದಿ ಮಾಡುತ್ತಿರುವಾಗಲೇ ಮಂಗಳೂರು ಕ್ಷೇತ್ರದ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು ಒಟ್ಟಿಗೇ ಪತ್ರಿಕಾಗೋಷ್ಠಿಯಲ್ಲಿ ಸೇರಿ, ಪಕ್ಷ ಗೆಲ್ಲಿಸುವುದಕ್ಕೆ ಶತಾಯ ಗತಾಯ ಯತ್ನ ಮಾಡುವುದಾಗಿ ಹೇಳಿದ್ದಾರೆ.

Advertisement

ಪಕ್ಷದಲ್ಲಿ ಟಿಕೆಟ್ ಗಿಟ್ಟಿಸಿರುವ ಸತೀಶ್ ಕುಂಪಲ ಅವರೊಂದಿಗೆ ಆಕಾಂಕ್ಷಿಗಳಾದ ಸಂತೋಷ್ ರೈ ಬೊಳಿಯಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಶೇಖರ ಉಚ್ಚಿಲ್, ಜೊತೆಯಲ್ಲೇ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್‌ಹೌಸ್, ಯಶವಂತ ಅಮೀನ್, ಜಗದೀಶ್ ಶೇಣವ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next