Advertisement

ದರೋಡೆಕೋರರನ್ನು ಕುರ್ಚಿ, ಚಪ್ಪಲಿಯಿಂದ ಹೊಡೆದೋಡಿಸಿದ್ದ “ದಂಪತಿ”ಗೆ ಶೌರ್ಯ ಪ್ರಶಸ್ತಿ

09:22 AM Aug 17, 2019 | Nagendra Trasi |

ಚೆನ್ನೈ: ಲಾಂಗ್(ಮಚ್ಚು) ಹಿಡಿದು ಬಂದಿದ್ದ ಇಬ್ಬರು ದರೋಡೆಕೋರರನ್ನು ದಂಪತಿ ಪ್ಲಾಸ್ಟಿಕ್ ಕುರ್ಚಿ, ಚಪ್ಪಲಿ ಎಸೆದು ಓಡಿಸಿರುವ ವೀಡಿಯೋ ತುಣುಕು ಇತ್ತೀಚೆಗೆ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡಿತ್ತು. ಏತನ್ಮಧ್ಯೆ ಧೈರ್ಯದಿಂದ ದರೋಡೆಕೋರರನ್ನು ಹೊಡೆದೋಡಿಸಿದ್ದ ದಂಪತಿಗೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ವಿಶೇಷ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

Advertisement

ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಿ.ಷಣ್ಮುಗವೇಲು ಮತ್ತು ಅವರ ಪತ್ನಿ ಸೆಂಥಾಮರೈಗೆ ಮುಖ್ಯಮಂತ್ರಿ ಪಳನಿಸ್ವಾಮಿ ಎರಡು ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ಪದಕದೊಂದಿಗೆ ಶೌರ್ಯ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ.

ಷಣ್ಮುಗವೇಲು ಅವರು ಮನೆಯ ಹೊರಗೆ ಕುರ್ಚಿಯಲ್ಲಿ ಕುಳಿತಿದ್ದಾಗ…ಹಿಂದಿನಿಂದ ಬಂದ ದರೋಡೆಕೋರನೊಬ್ಬ ಅವರ ಕುತ್ತಿಗೆಗೆ ಶಾಲು ಸುತ್ತಿ ಕೊಲ್ಲಲು ಯತ್ನಿಸಿದ್ದ. ಈ ವೇಳ ಷಣ್ಮುಗವೇಲು ಕುರ್ಚಿಯಿಂದ ಕೆಳಗೆ ಬಿದ್ದರೂ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು. ಏತನ್ಮಧ್ಯೆ ಮತ್ತೊಬ್ಬ ದರೋಡೆಕೋರ ಸಾಥ್ ನೀಡಿದ್ದ..ಅಷ್ಟರಲ್ಲಿ ಮನೆಯೊಳಗಿಂದ ಬಂದ ಪತ್ನಿ ಸೆಂಥಾಮರೈ ಕೂಡಲೇ ಇಬ್ಬರು ದರೋಡೆಕೋರರ ಮೇಲೆ ಕುರ್ಚಿ, ಚಪ್ಪಲಿ ಎಸೆದಿದ್ದರು. ಷಣ್ಮುಗವೇಲು ಕೂಡಾ ತಪ್ಪಿಸಿಕೊಂಡು ಪ್ಲಾಸ್ಟಿಕ್ ಕುರ್ಚಿಯಿಂದ ದರೋಡೆಕೋರರನ್ನು ಥಳಿಸಿದ್ದರು. ಕೊನೆಗೂ ಇಬ್ಬರು ಪರಾರಿಯಾಗಿದ್ದರು. ಈ ಎಲ್ಲಾ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next