Advertisement

ಗದಗ ಕೊಳವೆಬಾವಿ ದುರಂತ; ಮಗನ ಸಾವಿನ ಸುದ್ದಿ ಕೇಳಿ ದೊಡ್ಡಪ್ಪ ಸಾವು

04:23 PM Apr 12, 2017 | Team Udayavani |

ಗದಗ: ಕೊಳವೆ ಬಾವಿ ದುರಂತದಲ್ಲಿ ಶಂಕ್ರಪ್ಪ ಬಾಣದ್ ಸಾವನ್ನಪ್ಪಿರುವ ಸುದ್ದಿ ಕೇಳಿ ದೊಡ್ಡಪ್ಪ ಸಂಗಪ್ಪ ಬಾಣದ್(75ವರ್ಷ) ಸವಡಿ ಗ್ರಾಮದ ಮನೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

Advertisement

ರೋಣ ತಾಲೂಕಿನ ಸವಡಿ ಗ್ರಾಮದ ಶಂಕ್ರಪ್ಪ ಬಾಣದ್ ಜಮೀನಿನಲ್ಲಿನ ಕೊಳವೆ ಬಾವಿಯಲ್ಲಿ ನೀರು ಬತ್ತಿಹೋಗಿದ್ದರಿಂದ ರೀ ಬೋರ್ ಮಾಡಿಸುತ್ತಿದ್ದ ವೇಳೆಯಲ್ಲಿ ಮಾಲೀಕ ಶಂಕ್ರಪ್ಪ ಹಾಗೂ ಮೇಸ್ತ್ರಿ ಬಸವರಾಜ್ ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ್ದರು.

ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ 40 ಅಡಿ ಆಳದಲ್ಲಿ ಸಿಲುಕಿದ್ದ ಇಬ್ಬರ ಮೃತದೇಹವನ್ನು ಹೊರತೆಗೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next