Advertisement

Education Dept: ತಮ್ಮನ ವರ್ಗಾವಣೆ ಆದೇಶಕ್ಕೆ ರುಜು ಹಾಕಿದ ಅಣ್ಣ

10:30 PM Jul 13, 2023 | Team Udayavani |

ಗಂಗಾವತಿ: ಸಹೋದರನ ವರ್ಗಾವಣೆ ಆದೇಶಕ್ಕೆ ಒಡಹುಟ್ಟಿದ ಅಣ್ಣ ರುಜು ಹಾಕಿದ ಸೌಭಾಗ್ಯ ನೆನೆದು ಸ್ನೇಹಿತರು ಮತ್ತು ಕುಟುಂಬದವರ ಜತೆ ತಮ್ಮ ವರ್ಗಾವಣೆ ಆದೇಶ ಪತ್ರ ಹಾಗೂ ಸಹೋದರ ಭಾವಚಿತ್ರವನ್ನು ಹಂಚಿಕೊಂಡು ಭಾವುಕರಾದ ಪ್ರಸಂಗ ಗಂಗಾವತಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ.

Advertisement

ಗಂಗಾವತಿ ಬಿಇಒ ಆಗಿ ವರ್ಗಾವಣೆಗೊಂಡಿರುವ ವೆಂಕಟೇಶ ಅವರ ದೊಡ್ಡ ಅಣ್ಣ ಮಲ್ಲಿಕಾರ್ಜುನ ಶಿಕ್ಷಣ ಇಲಾಖೆಯ ಶಾಲಾ ಮತ್ತು ಸಾರಕ್ಷರತಾ ಇಲಾಖೆಯ ಸರಕಾರದ ಆಧೀನ ಕಾರ್ಯದರ್ಶಿಯಾಗಿದ್ದು ಸರಕಾರದ ಆದೇಶದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕುಡುಗೋಡು ತಾಲೂಕು ಬಿಇಒ ಆಗಿದ್ದ ಸಹೋದರ ವೆಂಕಟೇಶ ಅವರನ್ನು ಗಂಗಾವತಿ ಬಿಇಒ ಆಗಿ ವರ್ಗಾವಣೆ ಆದೇಶಕ್ಕೆ ರುಜು ಮಾಡಿದ್ದಾರೆ. ಆದೇಶ ಪತ್ರದಲ್ಲಿ ಬಿಇಒ ವೆಂಕಟೇಶ ಹಾಗೂ ಸರ್ಕಾರದ ಆಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ಹೆಸರುಗಳ‌ ಮುಂದೆ ರಾಮಚಂದ್ರಪ್ಪ ಎಂಬ ಹೆಸರಿದ್ದು ಇದನ್ನು ಇದು ದೇವರು ನಮಗೆ ನೀಡಿದ ಸೌಭಾಗ್ಯವಾಗಿದ್ದು ಸಹೋದರನ ರುಜುವಿನಡಿ ವರ್ಗಾವಣೆ ಆದೇಶ ಸಿಕ್ಕಿರುವುದು ಖುಷಿಯ ವಿಷಯವಾಗಿದೆ ಎಂದು ಬಿಇಒ ವೆಂಕಟೇಶ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮರಳು ಮಾಫಿಯಾದಿಂದ ಜೀವ ಬೆದರಿಕೆ: ರಕ್ಷಣೆ ಬೇಕು ಎಂದ ಜೆಡಿಎಸ್ ಶಾಸಕಿ

Advertisement

Udayavani is now on Telegram. Click here to join our channel and stay updated with the latest news.

Next