Advertisement

ಉದಯವಾಣಿ ಫಲಶ್ರುತಿ: ವೀಲ್‍ಚೇರ್ ನಲ್ಲಿ ಬಂದು ಪರೀಕ್ಷೆ ಬರೆದವನ ನೆರವಿಗೆ ಶಿಕ್ಷಣ ಇಲಾಖೆ

02:47 PM Apr 04, 2022 | Team Udayavani |

ದೋಟಿಹಾಳ: ಕಳೆದ ಸೋಮವಾರ ಆರಂಭವಾದ ಎಸ್ಎಸ್ಎಲ್‍ಸಿ ಪರೀಕ್ಷೆಗೆ ಹೆಸರೂರು ಗ್ರಾಮದ ವಿಶೇಷ ಚೇತನ ವಿದ್ಯಾರ್ಥಿ ಮೂರು ಕಿ.ಮೀ ದೂರ ವೀಲ್‍ಚೇರ್‍ ನಲ್ಲಿ ಬಂದು ಪರೀಕ್ಷೆ ಬರೆದಿರುವ ಕುರಿತಾಗಿ ಉದಯವಾಣಿ ವೆಬ್‍ಸೈಟ್‍ನ ವರದಿಯ ಬೆನ್ನಲ್ಲೇ ಶಿಕ್ಷಣ ಇಲಾಖೆ ವಿದ್ಯಾರ್ಥಿಯ ನೆರವಿಗೆ ನಿಂತಿದೆ.

Advertisement

ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ವಿಶೇಷಚೇತನ ವಿದ್ಯಾರ್ಥಿ ಮಲೇಗೌಡನನ್ನು ಕರೆದುಕೊಂಡು ಹೋಗಿ ಬರಲು ಹೆಸರೂರು ಗ್ರಾಮದ ಸರಕಾರಿ ಶಾಲಾ ಶಿಕ್ಷಕರೊಬ್ಬರಿಗೆ ಜವಾಬ್ದಾರಿಯನ್ನು ನೀಡಿದ್ದಾರೆ. ಸೋಮವಾರ ಖಾಸಗಿ ವಾಹನದ ಮೂಲಕ ಹೆಸರೂರು ಗ್ರಾಮದಿಂದ ಪರಿಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ.

ಮಲೇಗೌಡ ಹೆಸರೂರು ಗ್ರಾಮದಿಂದ ದೋಟಿಹಾಳ ಗ್ರಾಮದ ಪರೀಕ್ಷಾ ಕೇಂದ್ರಕ್ಕೆ ಸುಮಾರು ಮೂರು ಕಿಲೋಮೀಟರ್ ದೂರದಿಂದ ವೀಲ್ ಚೇರಿನಲ್ಲಿ ಕುಳಿತುಕೊಂಡು ತಂದೆಯ ಸಹಾಯದಿಂದ ಆಗಮಿಸಿ ಪರೀಕ್ಷೆ ಬರೆಯುತ್ತಿದ್ದ.

ಇದನ್ನೂ ಓದಿ:ವಿಟ್ಲ : ಬೈಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ 112 ತುರ್ತು ಸೇವೆಯ ವಾಹನ, ಇಬ್ಬರಿಗೆ ಗಾಯ

Advertisement

ವಿದ್ಯಾರ್ಥಿಯ ತಂದೆ ಚಂದ್ರಪ್ಪ ಮಾತನಾಡಿ, ಬಿಸಿಲಲ್ಲಿ ಮಗನನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಮೂರು ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಗಿತ್ತು. ನನ್ನ ಮಗನ ಪರೀಕ್ಷೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾರಿಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇಲಾಖೆಯ ಅಧಿಕಾರಿಗಳು ಮಲೇಗೌಡನನ್ನು ಉಳಿದ ಪರೀಕ್ಷಾ ದಿನಗಳಲ್ಲಿ ಕರೆದುಕೊಂಡು ಹೋಗಿ ಬರುವ  ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಹೆಸರೂರು ಗ್ರಾಮದ ಸರಕಾರಿ ಶಾಲೆ ಶಿಕ್ಷಕ  ವೀರಭದ್ರಗೌಡ ಪಾಟೀಲ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next