Advertisement

ಜೈಪುರ: ಜಾರಿ ನಿರ್ದೇಶನಾಲಯದಿಂದ 1.83 ಕೋಟಿ ದೇಶ-ವಿದೇಶ ಕರೆನ್ಸಿ ವಶ

01:50 PM Mar 15, 2019 | Team Udayavani |

ಹೊಸದಿಲ್ಲಿ : ಜಾರಿ ನಿರ್ದೇಶನಾಲಯ ಇಂದು ಶುಕ್ರವಾರ ಅಕ್ರಮ ಕರೆನ್ಸಿ ವಹಿವಾಟು ಜಾಲವನ್ನು ಭೇದಿಸಿರುವುದಾಗಿ ಹೇಳಿದೆ. ಅಂತೆಯೇ ಅದು ಜೈಪುರ ಮೂಲದ ಓರ್ವ ಕರೆನ್ಸಿ ವಹಿವಾಟುದಾರನಿಂದ 1.83 ಕೋಟಿ ರೂ. ಮೌಲ್ಯದ ಭಾರತೀಯ ಮತ್ತು ವಿದೇಶಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದೆ.

Advertisement

ಜೈಪುರದ ಹರೀಶ್‌ ಫಾರೆಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ನ ಹರೀಶ್‌ ಭತೀಜಾ ಎಂಬಾತನಿಗೆ ಆರ್‌ಬಿಐ ವಿದೇಶಿ ಕರೆನ್ಸಿಗಳ ಖರೀದಿ ಮತ್ತು ಮಾರಾಟಕ್ಕೆ ಅಧಿಕೃತ ಪರವಾನಿಗೆ ನೀಡಿತ್ತು. ಆದರೆ ಆತನು ಈ ಪರವಾನಿಗೆಯನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ವಿದೇಶಿ ಕರೆನ್ಸಿ ಜಾಲವನ್ನು ನಡೆಸುತ್ತಿದ್ದ ಎಂದು ಜಾರಿ ನಿರ್ದೇಶನಾಲಯದ ಪ್ರಕಟನೆ ತಿಳಿಸಿದೆ. 

ಹರೀಶ್‌ ಭತೀಜ  ಅಪಾರ ಪ್ರಮಾಣ ವಿದೇಶಿ ಕರೆನ್ಸಿಗಳನ್ನು ಸಂಗ್ರಹಿಸಿ ತನ್ನ ಸಹಾಯಕ ಕಮಲ್‌ ಭಂಡಾರಿಯ ನೆರವಿನಲ್ಲಿ ಅಹ್ಮದಾಬಾದ್‌, ಮುಂಬಯಿ ಮತ್ತಿತರ ನಗರಕ್ಕೆ ಅಕ್ರಮವಾಗಿ ರವಾನಿಸುತ್ತಿದ್ದ ಎಂದು ಇಡಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next