Advertisement

ರೋಸ್ ವ್ಯಾಲಿ ಹಗರಣ ಕೇಸ್; ಇ.ಡಿಯಿಂದ ಖಾನ್ ಒಡೆತನದ ಕೆಕೆಆರ್ ಸಿಇಒ ವೆಂಕಿ ಮೈಸೂರು ವಿಚಾರಣೆ

09:46 AM Oct 19, 2019 | Nagendra Trasi |

ನವದೆಹಲಿ: ರೋಸ್ ವ್ಯಾಲಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಸಿಇಒ ವೆಂಕಿ ಮೈಸೂರು ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಿರುವುದಾಗಿ ವರದಿ ತಿಳಿಸಿದೆ.

Advertisement

ವೆಂಕಿ ಮೈಸೂರು ಅವರ ಹೇಳಿಕೆಯನ್ನು ಪಿಎಂಎಲ್ ಎ (ಆರ್ಥಿಕ ಅವ್ಯವಹಾರ ನಿಯಂತ್ರಣ ಕಾಯ್ದೆ) ಅಡಿ ದಾಖಲಿಸಿಕೊಂಡಿರುವುದಾಗಿ ಇ.ಡಿ ವಿವರಿಸಿದೆ. ಕೆಕೆಆರ್ ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದ ಐಪಿಎಲ್ ತಂಡವಾಗಿದೆ.

ಯಾರು ವೆಂಕಿ ಮೈಸೂರು?

ವೆಂಕಿ ಮೈಸೂರು ಮೂಲತಃ ಕರ್ನಾಟಕದವರು. ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ನ ಸಿಇಒ ಮತ್ತು ಐಪಿಎಲ್ ತಂಡವಾಗಿರುವ ಕೆಕೆಆರ್ ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2002-03ರವರೆಗೆ ವೆಂಕಿ ಮೈಸೂರು ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್  ಆಫ್ ಬೆಂಗಳೂರು ಚಾಪ್ಟರ್ ನ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಇನ್ಸೂರೆನ್ಸ್ ಇಂಡಸ್ಟ್ರೀಯಲ್ಲಿ 25 ವರ್ಷಗಳ ಕಾಲ ದುಡಿದ ಅನುಭವ ಇವರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next