Advertisement

ಕಾರ್ತಿ ಚಿದಂಬರಂ ದಿಲ್ಲಿ, ಚೆನ್ನೈ ಆಸ್ತಿಗಳ ಮೇಲೆ ಇಡಿ ದಾಳಿ

11:55 AM Jan 13, 2018 | udayavani editorial |

ಹೊಸದಿಲ್ಲಿ : ಏರ್‌ಸೆಲ್‌ ಮ್ಯಾಕ್ಸಿಸ್‌ ಕೇಸಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಶನಿವಾರ ಕಾರ್ತಿ ಚಿದಂಬರಂ ಅವರ ದಿಲ್ಲಿ ಮತ್ತು ಚೆನ್ನೈ ಆಸ್ತಿಗಳ ಮೇಲೆ ದಾಳಿ ನಡೆಸಿದರು. 

Advertisement

2006ರಲ್ಲಿ  ವಿತ್ತ ಸಚಿವರಾಗಿದ್ದ  ಪಿ ಚಿಂದಂಬರಂ ಅವರು ವಿದೇಶೀ ಹೂಡಿಕೆ ಪ್ರೋತ್ಸಾಹನ ಮಂಡಳಿ(ಎಫ್ಐಪಿಬಿ)ಗೆ ನೀಡಿದ್ದ ಅನುಮತಿಗೆ ಈ ಕೇಸು ಸಂಬಂಧಿಸಿದ್ದಾಗಿದೆ.

“ಆಗಿನ ಹಣಕಾಸು ಸಚಿವ ಚಿದಂಬರಂ ಅವರು ಎಫ್ಐಪಿಬಿ ಅನುಮತಿ ಮಂಜೂರು ಮಾಡಿದ್ದಾಗಿನ ಪರಿಸ್ಥಿತಿ ಮತ್ತು ಸನ್ನಿವೇಶಗಳ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಜಾರಿ ನಿರ್ದೇಶನಾಲಯ  ಹೇಳಿದೆ. 

ಹಣಕಾಸು ಸಚಿವರು 600 ಕೋಟಿ ರೂ. ವರೆಗೆ ಮಾತ್ರವೇ ಅನುಮೋದನೆ ನೀಡಬಹುದು; ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ನಿಯಮಗಳ ಪ್ರಕಾರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಅನುಮೋದನೆ ಪಡೆಯಬೇಕಾಗಿರುತ್ತದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next