Advertisement

ಗಡಿಯಾಚೆಗಿನ ಅಕ್ರಮ ಹಣ ವರ್ಗಾವಣೆ: ಇಡಿಯಿಂದ 6 ಬಾಂಗ್ಲಾದೇಶಿಗಳ ಬಂಧನ

06:03 PM May 15, 2022 | Team Udayavani |

ಹೊಸದಿಲ್ಲಿ: ಗಡಿಯಾಚೆಗಿನ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಆರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯ ಭಾನುವಾರ ತಿಳಿಸಿದೆ.

Advertisement

ಬಂಧಿತರಲ್ಲಿ ಗುಂಪಿನ “ಮಾಸ್ಟರ್ ಮೈಂಡ್” ಪ್ರೊಶಾಂತ ಕುಮಾರ್ ಹಲ್ದರ್ ಸೇರಿದ್ದಾನೆ, ನೆರೆಯ ದೇಶದಲ್ಲಿ 10,000 ಕೋಟಿಗಳಷ್ಟು ಬಾಂಗ್ಲಾದೇಶಿ ಟಾಕಾದ ಮೊತ್ತದ ಬ್ಯಾಂಕ್ ವಂಚನೆ ಮಾಡಿದ ಆರೋಪ ಇವನೆ ಮೇಲಿದೆ.

ಪ್ರಶಾಂತ ಹಲ್ದರ್ ಮತ್ತು ಶಿಬ್ ಶಂಕರ್ ಹಲ್ದರ್ (ಭಾರತೀಯ ಗುರುತು) ಮುಂತಾದ ಅಲಿಯಾಸ್ ಹೊಂದಿರುವ ಹಲ್ದರ್ ವಿರುದ್ಧ ಇಂಟರ್‌ಪೋಲ್ ಜಾಗತಿಕ ಬಂಧನ ವಾರಂಟ್ ಜಾರಿ ಮಾಡಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ. ಆತ ಬಾಂಗ್ಲಾದೇಶ ಮತ್ತು ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾನೆ ಎಂದು ತಿಳಿದು ಬಂದಿದೆ.

ಸ್ವಪನ್ ಮೈತ್ರಾ ಅಲಿಯಾಸ್ ಸ್ವಪನ್ ಮಿಸ್ತ್ರಿ, ಉತ್ತಮ್ ಮೈತ್ರಾ ಅಲಿಯಾಸ್ ಉತ್ತಮ್ ಮಿಸ್ತ್ರಿ, ಇಮಾಮ್ ಹೊಸಿಯಾನ್ ಅಲಿಯಾಸ್ ಇಮೋನ್ ಹಾಲ್ಡರ್ ಮತ್ತು ಅಮಾನ ಸುಲ್ತಾನಾ ಅಲಿಯಾಸ್ ಶರ್ಮಿ ಹಲ್ದರ್ ಮತ್ತು ಪ್ರಾಣೇಶ್ ಕುಮಾರ್ ಹಲ್ದರ್ ಅವರು ಬಂಧಿತರಲ್ಲಿ ಸೇರಿದ್ದಾರೆ.

ಮೇ 13 ರಂದು ದಾಳಿ ನಡೆಸಿದ ನಂತರ ಇಡಿ ಅವರನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಬಾಂಗ್ಲಾದೇಶಿ ಪ್ರಜೆಗಳಾದ ಪ್ರೊಶಾಂತ ಕುಮಾರ್ ಹಲ್ದರ್, ಪ್ರಿತೀಶ್ ಕುಮಾರ್ ಹಲ್ದರ್ ಮತ್ತು .ಪ್ರೊಶಾಂತ ಕುಮಾರ್ ಹಾಲ್ಡರ್ ಭಾರತೀಯ ಪ್ರಜೆಯ ವೇಷದಲ್ಲಿ ಶಿಬ್ಶಂಕರ್ ಹಲ್ದರ್ ಎಂದು ಕಂಡುಬಂದಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯದಾದ್ಯಂತ ಅವರ ಸಹಚರರಿಗೆ ಸಂಬಂಧಿಸಿದ 11 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಯಿತು ಎಂದು ಇಡಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next