Advertisement

ಆರ್ಥಿಕ ಕುಸಿತಕ್ಕೆ ರಾಜನ್‌ ನೀತಿ ಕಾರಣ: ನೀತಿ ಆಯೋಗ

06:00 AM Sep 04, 2018 | Team Udayavani |

ಹೊಸದಿಲ್ಲಿ: ದೇಶದ ಆರ್ಥಿಕ ಸ್ಥಿತಿ ಕುಸಿಯಲು ನೋಟು ಅಮಾನ್ಯ ಕಾರಣವಲ್ಲ. ಬದಲಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಆಗಿದ್ದ ರಘುರಾಮ್‌ ರಾಜನ್‌ ನೀತಿಗಳು ಕಾರಣ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿದ್ದಾರೆ. 

Advertisement

ಮರುಪಾವತಿಯಾಗದ ಸಾಲದ ಬಗ್ಗೆ ರಾಜನ್‌ ಕೈಗೊಂಡ ನೀತಿಯಿಂದಾಗಿ, ಬ್ಯಾಂಕ್‌ಗಳು ಉದ್ಯಮಗಳಿಗೆ ಸಾಲ ಕೊಡುವುದನ್ನು ನಿಲ್ಲಿಸಿದ್ದವು. ಮರುಪಾವತಿಯಾಗದ ಸಾಲಗಳನ್ನು ಗುರುತಿಸಲು ಬ್ಯಾಂಕ್‌ಗಳಿಗೆ ರಾಜನ್‌ ಗಡುವು ನೀಡಿದ್ದರು ಎಂದು ರಾಜೀವ್‌ ಕುಮಾರ್‌ ಹೇಳಿದ್ದಾರೆ. 2015-16ರ ಕೊನೆಯ ತ್ತೈಮಾಸಿಕದಿಂದ ಆರು ತ್ತೈಮಾಸಿಕಗಳವರೆಗೆ ನಿರಂತರವಾಗಿ ಆರ್ಥಿಕತೆ ಕುಸಿದಿತ್ತು ಎಂದಿದ್ದಾರೆ.

ಎರಡು ವರ್ಷ ಪೂರೈಸಿದ ಪಟೇಲ್‌: ರಾಜನ್‌ ನಿವೃತ್ತಿಯ ನಂತರ ಆರ್‌ಬಿಐ ಗವರ್ನರ್‌ ಆಗಿ ಅಧಿಕಾರ ವಹಿಸಿಕೊಂಡ ಊರ್ಜಿತ್‌ ಪಟೇಲ್‌ ಮಂಗಳವಾರಕ್ಕೆ ಎರಡು ವರ್ಷ ಪೂರೈಸಲಿದ್ದಾರೆ. ಇನ್ನೊಂದು ವರ್ಷ ಇವರು ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next