Advertisement

ಚು.ಆಯೋಗಕ್ಕೆ ಲಂಚ: ದಿನಕರನ್‌ ವಿರುದ್ಧದ ವಿಚಾರಣೆಗೆ ಹೈಕೋರ್ಟ್‌ ತಡೆ

09:58 AM Mar 08, 2019 | udayavani editorial |

ಹೊಸದಿಲ್ಲಿ : ಶಶಿಕಲಾ ನೇತೃತ್ವದ ಬಣಕ್ಕೆ ಎಐಎಡಿಎಂಕೆ ಪಕ್ಷದ ಎರಡೆಲೆ ಚಿಹ್ನೆಯನ್ನು ಕೊಡಿಸುವ ಸಲುವಾಗಿ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ಕೊಟ್ಟ ಆರೋಪ ಪ್ರಕರಣದಲ್ಲಿ  ಮಾಜಿ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್‌ ವಿರುದ್ಧದ ವಿಚಾರಣೆಗೆ ದಿಲ್ಲಿ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. 

Advertisement

ತನ್ನ ವಿರುದ್ಧ ಕ್ರಿಮಿನಲ್‌ ಸಂಚು ಮತ್ತು ಸಾಕ್ಷ್ಯ ನಾಶದ ಆರೋಪಗಳನ್ನು ಪ್ರಶ್ನಿಸಿ ದಿನಕರನ್‌ ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ದಿಲ್ಲಿ ಹೈಕೋರ್ಟ್‌, ದಿಲ್ಲಿ ಪೋಲಿಸರಿಗೆ ಉತ್ತರ ಕೇಳಿ ನೊಟೀಸ್‌ ಜಾರಿ ಮಾಡಿದೆ. 

ದಿಲ್ಲಿ ಹೈಕೋರ್ಟ್‌ ತನ್ನ ಮಧ್ಯಾವಧಿ ಆದೇಶದಲ್ಲಿ ವಿಚಾರಣಾ ನ್ಯಾಯಾಲಯದ ಕಲಾಪಕ್ಕೆ ತಡೆ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್‌ 20ಕ್ಕೆ ನಿಗದಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next