Advertisement

ಚಿಂಚೋಳಿ ತಾಲೂಕಿನಲ್ಲಿ ಭೂಕಂಪನ

08:29 PM Aug 20, 2021 | Team Udayavani |

ಕಲಬುರಗಿ:ಚಿಂಚೋಳಿ ತಾಲೂಕಿನ ಗಡಿಕೇಶ್ವರ, ತೇಗಲತಿಪ್ಪಿ,ರಾಯಕೊಡ, ಹೊಸಳ್ಳಿ, ಬೆನಕನಹಳ್ಳಿ, ಕೆರೋಳ್ಳಿ ಭಂಟನಳ್ಳಿ ರುದನೂರ ಚಿಂತಪಳ್ಳಿ ಭೂತಪುರ ಭಂಟನಳ್ಳಿ ಗ್ರಾಮಗಳಲ್ಲಿ ಇಂದು ಸಂಜೆ ಭೂಮಿ ಕಂಪಿಸಿದ್ದು ಜನರು ಭಯಗೊಂಡು ಮನೆ ಬಿಟ್ಟು ಹೊರಗೆ ಓಡಿ ಬಂದು ನಿಂತಿರುವ ಬಗ್ಗೆ ವರದಿಯಾಗಿದೆ.

Advertisement

ಮೊಹರಂ ಸಂಭ್ರಮದಲ್ಲಿದ್ದ  ಗ್ರಾಮಸ್ಥರಿಗೆ ಭೂಮಿಯಿಂದ ಭಾರಿ ಶಬ್ದ ಉಂಟಾಗಿ ಭೂಮಿ ಕಂಪಿಸಿದ್ದರಿಂದ ಮನೆಯಲ್ಲಿದ್ದ ಸಾಮಾನುಗಳು ಟಿವಿ ಅಲೆಮಾರಿ ಫ್ಯಾನ್ ಫ್ರಿಜ್ ಅಡುಗೆ ಸಾಮಾನುಗಳು ಪಾತ್ರೆಗಳು ಅಲುಗಾಡಿರುವ ಅನುಭವವಾಗಿದೆ.

ಇದರಿಂದ ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದ ಮಹಿಳೆಯರು ಚಿಕ್ಕಮಕ್ಕಳು ಜೀವದ ಭಯದಿಂದ ಹೊರಗೋಡಿ ಬಂದು ನಿಂತಿದ್ದಾರೆ ಎಂದು ಗ್ರಾಮಸ್ಥರಾದ ಬಸವರಾಜ್ ಕೆರಳ್ಳಿ ವಿಜಯಕುಮಾರ್ ಮಲ್ಲಿಕಾರ್ಜುನ್  ಗಿರೀಶ್  ಗಡಿಕೇಶ್ವರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next