Advertisement

BREAKING : ಚಿಂತಾಮಣಿ ಸಮೀಪ ಭಾರೀ ಭೂಕಂಪದ ಅನುಭವ : ಹೆದರಿ ಓಡಿದ ಜನ

09:15 AM Nov 10, 2021 | Team Udayavani |

ಚಿಕ್ಕಬಳ್ಳಾಪುರ : ಜಿಲ್ಲೆಯ ಚಿಂತಾಮಣಿ ಸಮೀಪದ ಮಿಟ್ಟಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಭೂಕಂಪನವಾದ ಅನುಭವವಾಗಿದೆ. ಜೋರು ಶಬ್ಧದ ಬೆನ್ನಲೇ ಜನರು ಭಯಭೀತರಾಗಿ ಮನೆಯಿಂದ ಹೊರ ನಡೆದಿದ್ದಾರೆ.

Advertisement

ರಾತ್ರಿ 11 ಗಂಟೆ ವೇಳೆ ಭಾರೀ ಶಬ್ದವಾಗಿದ್ದು, ಭೂಮಿ ಕಂಪಿಸಿದೆ ಎಂದು ಹೇಳಲಾಗುತ್ತಿದೆ. ಜನ ಭೂಕಂಪವಾಗಿದೆ ಎಂದು ಹೆದರಿ ಮನೆಗಳಿಂದ ಹೊರ ಓಡಿದ್ದಾರೆ.

ಇನ್ನು ಘಟನೆಯಿಂದಾಗಿ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದ್ದು, ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next