Advertisement

ನೋಟು ಅಪಮೌಲ್ಯದ ಮಾಹಿತಿ ನೀಡಿ

01:13 PM May 29, 2017 | Karthik A |

ಹೊಸದಿಲ್ಲಿ: ನೋಟುಗಳ ಅಪಮೌಲ್ಯಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಸಾರ್ವಜನಿಕರಿಗೆ ನೀಡುವುದು ಪ್ರತಿಯೊಂದು ಸರಕಾರಿ ಇಲಾಖೆಯ ಕರ್ತವ್ಯವಾಗಿದೆ. ಹಾಗಾಗಿ, ನೋಟು ಅಮಾನ್ಯ ನಿರ್ಧಾರದ ಹಿಂದಿನ ಕಾರಣಗಳು, ಅದರ ಅಂಕಿ ಅಂಶಗಳನ್ನು ಇಲಾಖೆಗಳು ಬಹಿರಂಗಪಡಿಸಬೇಕು ಎಂಬ ಸ್ಪಷ್ಟ ಸೂಚನೆಧಿಯನ್ನು ಕೇಂದ್ರ ಮಾಹಿತಿ ಆಯೋಗ ರವಿವಾರ ನೀಡಿದೆ. ಅಪನಗದೀಕರಣಕ್ಕೆ ಸಂಬಂಧಿಸಿ ಸಲ್ಲಿಸಲಾದ ಆರ್‌ಟಿಐ ಅರ್ಜಿಗಳನ್ನು ಕೇಂದ್ರ ವಿತ್ತ ಸಚಿವಾಲಯ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ ವಿವಿಧ ನೆಪಗಳನ್ನು ಹೇಳಿ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ಆಯೋಗದ ಈ ಸೂಚನೆ ಮಹತ್ವ ಪಡೆದಿದೆ. ಜನರಿಂದ ಮಾಹಿತಿಯನ್ನು ಮುಚ್ಚಿಡಲು ನಡೆಸುವ ಯಾವುದೇ ಯತ್ನವು, ದೇಶದ ಆರ್ಥಿಕತೆಯ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಲಿದೆ ಎಂದು ಮುಖ್ಯ ಮಾಹಿತಿ ಆಯುಕ್ತ ಶ್ರೀಧರ್‌ ಆಚಾರ್ಯುಲು ಹೇಳಿದ್ದಾರೆ.

Advertisement

ಬಾಹುಬಲಿಯ ಉಲ್ಲೇಖ: ಈ ಕುರಿತು ಮಾತನಾಡುತ್ತಾ ಇತ್ತೀಚೆಗೆ ಬಿಡುಗಡೆಯಾದ ಬಾಹುಬಲಿ ಸಿನಿಮಾವನ್ನೂ ಪ್ರಸ್ತಾಪಿಸಿದ ಅವರು, ‘ನೋಟು ಅಮಾನ್ಯ ನಿರ್ಧಾರದ ಸುತ್ತಲಿನ ಮಾಹಿತಿಗಳಿಗೆ ‘ಉಕ್ಕಿನ ಕೋಟೆ’ ನಿರ್ಮಿಸುವಂಥ ಅಭ್ಯಾಸವನ್ನು ಮೊದಲು ಬಿಟ್ಟುಬಿಡಬೇಕು. ಸಾರ್ವಜನಿಕರಿಗೆ ಸಂಬಂಧಿಸಿದ ವಿಚಾರವನ್ನು ಉಕ್ಕಿನ ಕೋಟೆಯೊಳಗಿಟ್ಟು, ಅದನ್ನು ಬಾಹುಬಲಿಗೂ ಒಡೆಯಲಾಗದಂತೆ ಮಾಡುವುದು ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಶೋಭೆ ತರುವುದಿಲ್ಲ,’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next