Advertisement

BJP ಸಭೆಯಲ್ಲಿ ಭಾರಿ ಗಲಾಟೆ ಬಳಿಕ ಗುಂಡಿನ ದಾಳಿ!

08:13 PM Jun 25, 2023 | Team Udayavani |

ಪಾಟ್ನಾ: ಬಿಹಾರದ ಮಾಧೇಪುರ್ ಜಿಲ್ಲೆಯ ಮುರ್ಲಿಗಂಜ್‌ನಲ್ಲಿ ನಡೆದ ಬಿಜೆಪಿ ಸಮಾರಂಭದಲ್ಲಿ ತೀವ್ರ ಗಲಾಟೆಯಾಗಿದ್ದು, ಈ ವೇಳೆ ವ್ಯಕ್ತಿಯೊಬ್ಬ ಗುಂಡು ಹಾರಿಸಿರುವ ಆತಂಕಕಾರಿ ಘಟನೆ ಭಾನುವಾರ ನಡೆದಿದೆ.

Advertisement

ಗುಂಡು ತಗುಲಿ ಬಿಜೆಪಿ ಕಾರ್ಯಕರ್ತನೊಬ್ಬ ಗಾಯಗೊಂಡಿದ್ದು. ಕಾರ್ಯಕ್ರಮದ ವೇಳೆ ಆರೋಪಿ ಹಾಗೂ ಗಾಯಾಳುವಿನ ಗುಂಪಿನ ನಡುವೆ ವಾಗ್ವಾದ ನಡೆದಿದ್ದು, ನಂತರ ಗಲಾಟೆ ಆರಂಭವಾಗಿದೆ. ಕಾಲಿಗೆ ಗುಂಡು ತಗುಲಿದ ವ್ಯಕ್ತಿ ಸಂಜಯ್ ಭಗತ್ ಎಂದು ಗುರುತಿಸಲಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಗಳ ತಾರಕಕ್ಕೇರಿ ಆರೋಪಿ ಪಂಕಜ್ ಪಟೇಲ್ ತನ್ನ ಬಳಿಯಿದ್ದ ಪಿಸ್ತೂಲ್‌ ತೆಗೆದು ಹಲವಾರು ಸುತ್ತು ಗುಂಡು ಹಾರಿಸಿದ್ದಾನೆ.ಆತ ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next