Advertisement

ವಿಶೇಷ ಭದ್ರತಾ ಕೊಠಡಿಗೆ ನಟ ದುನಿಯಾ ವಿಜಯ್‌

12:30 PM Sep 24, 2018 | |

ಬೆಂಗಳೂರು: ಜಿಮ್‌ ತರಬೇತುದಾರ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ 14ದಿನಗಳ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್‌ಗೆ ಪರಪ್ಪನ ಅಗ್ರಹಾರ ಕಾರಾಗೃಹದ ವಿಶೇಷ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ.

Advertisement

ಕೋರಮಂಗಲದ ನ್ಯಾಯಾಧೀಶರ ಮನೆಯಿಂದ ವಿಜಯ್‌ ಸೇರಿದಂತೆ ನಾಲ್ವರು ಆರೋಪಿಗಳು  ಭಾನುವಾರ ರಾತ್ರಿ 9-40ರ ಸುಮಾರಿಗೆ ಜೈಲಿಗೆ ಕರೆತರಲಾಯಿತು. ಬಳಿಕ ನಿಯಮಾವಳಿಗಳಂತೆ ಎಂಟ್ರಿ ನಮೂದಿಸಿ, ವೈದ್ಯಕೀಯ ತಪಾಸಣೆ ನಡೆಸಿ  ವಶಕ್ಕೆ ಪಡೆದು ವಿಜಯ್‌ ಅವರನ್ನು ವಿಶೇಷ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಉಳಿದ ಮೂವರು ಆರೋಪಿಗಳನ್ನು ಬ್ಯಾರಕ್‌ ಒಂದರಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ನಲಪಾಡ್‌ ಇದ್ದ ಕೊಠಡಿಯಲ್ಲಿ ವಿಜಯ್‌!: ಉದ್ಯಮಿ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿದ್ದ ಮೊಹಮದ್‌ ನಲಪಾಡ್‌ ಇದ್ದ ವಿಶೇಷ ಭದ್ರತಾ ಕೊಠಡಿಯಲ್ಲಿಯೇ ನಟ ವಿಜಯ್‌ರನ್ನು ಇಡಲಾಗಿದೆ ಎಂದು ತಿಳಿದು ಬಂದಿದೆ. ವಿಜಯ್‌ ಸೃಷ್ಟಿಸಿದ್ದ ವಿವಾದಗಳು!

ಚಿತ್ರ ನಟ ದುನಿಯಾ ವಿಜಯ್‌ 2013ರಿಂದಲೂ ಹಲವು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. 2013ರಲ್ಲಿ ಮೊದಲ ಪತ್ನಿ ನಾಗರತ್ನ ಅವರಿಗೆ ಜೀವಬೆದರಿಕೆ ಹಾಕಿದ ಆರೋಪ ಸಂಬಂಧ ದೂರು ದಾಖಲಾಗಿತ್ತು. ಬಳಿಕ ಸ್ನೇಹಿತರೊಬ್ಬರ ಕೌಟುಂಬಿಕ ಜಗಳದಲ್ಲಿ ಮಧ್ಯಪ್ರವೇಶಿಸಿದ್ದ ವಿಜುಯ್‌, ಹಿರಿಯ ವೃದ್ಧರ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದಲ್ಲದೆ ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಸಾಹಸ ಕಲಾವಿದರಾದ ಅನಿಲ್‌ ಹಾಗೂ ಉದಯ್‌ ಮೃತಪಟ್ಟ ಪ್ರಕರಣದ ಆರೋಪಿ ಚಿತ್ರನಿರ್ಮಾಪಕ ಸುಂದರ್‌ಗೌಡ ಅವರನ್ನು ಪೊಲೀಸ್‌ ಪೇದೆ ಬಂಧಿಸಲು ತೆರಳಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದ ವಿಜಯ್‌, ಸುಂದರ್‌ ಗೌಡ ಪರಾರಿಯಾಗಲು ಸಹಕರಿಸಿದ್ದ.

Advertisement

ಈ ಪ್ರಕರಣ ಸಂಬಂಧ ಹಲವು ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ವಿಜಯ್‌ನನ್ನು ಕಳೆದ ಜೂನ್‌ನಲ್ಲಿ ಸಿ.ಕೆ ಅಚ್ಚುಕಟ್ಟು ಠಾಣೆ ಪೊಲೀಸರು ತಮಿಳುನಾಡು ಗಡಿಯ ರೆಸಾರ್ಟ್‌ನಿಂದ ಬಂಧಿಸಿ ಕರೆತಂದಿದ್ದರು. ಈ ಪ್ರಕರಣದಲ್ಲಿ ಮೊದಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ ಕಾರಣ ನ್ಯಾಯಾಂಗ ಬಂಧನ ಭೀತಿಯಿಂದ ಪಾರಾಗಿದ್ದರು. ಈ  ಬೆನ್ನಲ್ಲೇ ನಿವೃತ್ತ ಯೋಧ ವೆಂಕಟೇಶ್‌ ಎಂಬುವವರು ಕೂಡ ದುನಿಯಾ ವಿಜಯ್‌ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಿದ್ದಾರೆ. 

ವಿಜಯ್‌ ಭಾವಮೈದ ಕಿರಣ್‌ಗೆ 4 ಲಕ್ಷ. ರೂ. ಸಾಲ ನೀಡಿದ್ದು, ವಾಪಾಸ್‌ ನೀಡಿರಲಿಲ್ಲ. ಈ ವಿಚಾರವನ್ನು ತಿಳಿಸಲು ವಿಜಯ್‌ ಮನೆಯ ಹತ್ತಿರ ಹೋಗಿದ್ದಾಗ, ಮತ್ತೂಮ್ಮೆ ಮನೆಯ ಹತ್ತಿರ ಬಂದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ನಿಂದಿಸಿ ಪ್ರಾಣಬೆದರಿಕೆ  ಒಡ್ಡಿದ್ದರು ಎಂದು ವೆಂಕಟೇಶ್‌ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ. 

ಪ್ರಕರಣದ ಟೈಮ್‌ ಲೈನ್‌ 
* ಶನಿವಾರ ರಾತ್ರಿ 10: ಮಾರುತಿಗೌಡನ ಜತೆ ಜಗಳ 
* ರಾತ್ರಿ 10.30: ಮಾರುತಿ ಗೌಡನ ಅಪಹರಣ ಹಲ್ಲೆ 
* ರಾತ್ರಿ 11:30: ಹೈಗ್ರೌಂಡ್ಸ್‌ ಪೊಲೀಸರಿಂದ ವಿಜಯ್‌ ಸೇರಿ ಆರೋಪಿಗಳ ಬಂಧನ 
* ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ವೈಯಾಲಿಕಾವಲ್‌ ಆಸ್ಪತ್ರೆಗೆ ಸ್ಥಳಾಂತರ 
* ರಾತ್ರಿ: 9 ಗಂಟೆ – ನ್ಯಾಯಾಧೀಶರಿಂದ 14 ದಿನಗಳ ನ್ಯಾಯಾಂಗ ಬಂಧನ ಆದೇಶ 
* ರಾತ್ರಿ 9:40 – ಪರಪ್ಪನ ಅಗ್ರಹಾರ ಜೈಲಿಗೆ 

Advertisement

Udayavani is now on Telegram. Click here to join our channel and stay updated with the latest news.

Next