Advertisement

ಯಮಕನಮರಡಿಯಲ್ಲಿ ಮೂಕ ಜೋಡಿ ಗಟ್ಟಿ ಮೇಳ

05:56 PM Aug 01, 2021 | Team Udayavani |

ಯಮಕನಮರಡಿ: ಹುಕ್ಕೇರಿ ತಾಲೂಕಿನ ಹತ್ತರಗಿ ಸುಕ್ಷೇತ್ರದ ಕಾರಿಮಠದಲ್ಲಿ ಶನಿವಾರ ಮೂಗರಾದ ಪ್ರವೀಣ ಈರಣ್ಣ ಖಾನಾಪೂರಿ ಹಾಗೂ ಸಂಕೇಶ್ವರದ ಮೇಘಾ ಶಂಕರ ಹಂಜಾನಹಟ್ಟಿ ಅವರಿಬ್ಬರ ಶುಭವಿವಾಹ ನೆರವೇರಿತು.

Advertisement

ಪ್ರವೀಣ ಬೆಂಗಳೂರಿನ ಮಾಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಲಾಕ್‌ಡೌನ್‌ ಸಂದರ್ಭದಲ್ಲಿ ಹತ್ತರಗಿಗೆ ಬಂದಿದ್ದರು. ಇತನ ವಿವಾಹಕ್ಕೆ ತಾನು ಕಲಿತ ಶಾಲೆಯ ಸುಮಾರು 30 ಹೆಚ್ಚು ಮೂಗ ಗೆಳೆಯರು ವಿವಿಧ ಗ್ರಾಮಗಳಿಂದ ಬಂದು ನವ ಜೋಡಿಗೆ ಶುಭ ಕೋರಿದರು. ಕೋವಿಡ್‌ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೇಸರ್‌ ಬಳಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಧು-ವರರ ತಂದೆ-ತಾಯಿ, ಹತ್ತರಗಿ ಗ್ರಾಮದ ಸಿದ್ದಪ್ಪ ಕುಡಚಿ, ಕೆಂಪಣ್ಣ ಖತಗಲ್ಲಿ, ಮಾಹಾರುದ್ರ ತೇರಣಿ, ಮಲ್ಲಪ್ಪ ಶಿಳ್ಳಿ ಹಾಗೂ ಹಿರಿಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next