ಮೈಸೂರು: ದುಬೈಗೆ ಪ್ರವಾಸ ಕರೆದೊಯ್ಯುವುದಾಗಿ ಹೇಳಿ ವಂಚಕನೊಬ್ಬ ನಗರದ ವ್ಯಕ್ತಿಯೊಬ್ಬರಿಗೆ 3 ಲಕ್ಷ ರೂ. ವಂಚಿಸಿರುವ ಬಗ್ಗೆ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇರಳ ಮೂಲದ ಪ್ರೇಮದಾಸ್ ಎಂಬುವನ ವಿರುದ್ಧ ನಗರದ ಬೋಗಾದಿ ನಿವಾಸಿ ಕೃಷ್ಣೇಗೌಡ ಎಂಬವರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಕೃಷ್ಣೇಗೌಡ ಹಾಗೂ ಇನ್ನಿತರರು ಈ ಹಿಂದೆ ಜಮ್ಮು, ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿ ಕೇರಳದ ಪ್ರೇಮದಾಸ್ ಪರಿಚಯವಾಗಿದ್ದರು. ನಾನು ಟ್ರಾವೆಲ್ ಏಜೆಂಟ್ ಆಗಿದ್ದು, ಪ್ರವಾಸಗಳನ್ನು ಆಗಾಗ್ಗೆ ಏರ್ಪಡಿಸುತ್ತೇನೆ ಎಂದು ಹೇಳಿದ್ದನು. ಪ್ರವಾಸ ಮುಗಿಸಿ ವಾಪಸ್ಸಾದ ಕೃಷ್ಣೇಗೌಡ ಹಾಗೂ ಸ್ನೇಹಿತರು ದುಬೈಗೆ ಪ್ರವಾಸ ತೆರಳಲು ಸಿದ್ಧತೆ ನಡೆಸಿದ್ದರು. ಈ ವೇಳೆ ಪ್ರೇಮದಾಸ್ನನ್ನು ಅವರ ಸಂಪರ್ಕಿಸಿದರು. ಆತ ಕೂಡ ದುಬೈ ಪ್ರವಾಸವನ್ನು ಏರ್ಪಡಿಸುವುದಾಗಿ ಹೇಳಿದ್ದ. ಆತನ ಮಾತನ್ನು ನಂಬಿದ ಅವರು ನಜರಬಾದ್ನ ಖಾಸಗಿ ಹೋಟೆಲ್ನಲ್ಲಿ 25 ಸಾವಿರ ರೂ. ಮುಂಗಡ ನೀಡಿದ್ದರು. ನಂತರ ಹಂತಹಂತವಾಗಿ ಆತನಿಗೆ 3 ಲಕ್ಷ ರೂ. ನೀಡಿದ್ದರು. ನಂತರ ಆತ ಪ್ರವಾಸಕ್ಕೆ ದಿನಾಂಕವನ್ನು ನಿಗದಿಪಡಿಸಲಿಲ್ಲ. ಆತನನ್ನು ಪ್ರಶ್ನಿಸಲು ಮುಂದಾದ ವೇಳೆ ಆತನ ಮೊಬೈಲ್ ಸ್ವಚ್ ಆಫ್ ಆಗಿತ್ತು. ಹೀಗಾಗಿ ಅವರು ಆತನ ವಿರುದ್ಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲಿಸರು ತನಿಖೆ ನಡೆಸುತ್ತಿದ್ದಾರೆ.